ಪುತ್ತೂರು: ಮನೆ ಮುಂದೆ ನಿಲ್ಲಿಸಿದ ದ್ವಿಚಕ್ರ ವಾಹನವೊಂದು ಕಳವಾದ ಘಟನೆ ಇಲ್ಲಿನ ನೆಲ್ಲಿಕಟ್ಟೆಯಲ್ಲಿ ನಡೆದ ಬಗ್ಗೆ ವರದಿಯಾಗಿದೆ. ನೆಲ್ಲಿಕಟ್ಟೆ ಮಾನಕ ನಿವಾಸಿ ನಿಕಿಲ್ ಎನ್ ಎಂಬವರ ಅಕ್ಕ ನಿಶಾ ಶೈಲೇಶ್ ಮಾಲಿಕತ್ವದ ದ್ವಿಚಕ್ರ ವಾಹನವನ್ನು ನೆಲ್ಲಿಕಟ್ಟೆ ಮನೆ ಮುಂದೆ ಆ.1ರ ರಾತ್ರಿ ನಿಲ್ಲಿಸಿದ್ದರು. ಬೆಳಿಗ್ಗೆ ನೋಡುವಾಗ ದ್ವಿಚಕ್ರವಾಹನ ನಿಲ್ಲಿಸಿದ ಸ್ಥಳದಲ್ಲಿ ಇರಲಿಲ್ಲ. ಯಾರೋ ಕಳ್ಳರು ದ್ವಿಚಕ್ರವಾಹನ ಕಳವು ಮಾಡಿದ್ದು, ಈ ಕುರಿತು ನಿಕಲ್ ಎನ್ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.