ಬೆಳ್ಳಾರೆ:ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಪ್ರವೀಣ್ ನೆಟ್ಟಾರು ಮನೆಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶಪಾಲ್ ಸುವರ್ಣ ಆ.5ರಂದು ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿ 1 ಲಕ್ಷ ಸಹಾಯಧನದ ಚೆಕ್ ವಿತರಿಸಿದರು.
ಈ ಸಂದರ್ಭದಲ್ಲಿ ಪ್ರವೀಣ್ ಶೆಟ್ಟಿ, ಪ್ರವೀಣ್ ಪೂಜಾರಿ ಹಿರೇಬೆಟ್ಟು, ಪ್ರಶಾಂತ್ ಕಾಂಚನ್, ಮಂಜು ಕೊಳ,ಶೇಖರ್ ಶೆಟ್ಟಿ ಹಿರಿಯಡ್ಕ,ಬಾಲಕೃಷ್ಣ ಕೋಟ್ಯಾನ್, ಸನತ್ ಸಾಲ್ಯಾನ್,ಹರೀಶ್ ವಿಟ್ಲ,ಸಚಿನ್ ಸುವರ್ಣ,ಸುರೇಶ್ ಸಾಲ್ಯಾನ್ ಮಲ್ಪೆ, ರಾಜೇಶ್ ಕುಂದರ್ ಪಿತ್ರೋಡಿ, ರವಿ ಸಾಲ್ಯಾನ್,ಶುಭಕರ ಶೆಟ್ಟಿ ಕಬ್ಯಾಡಿ,ಚಿತ್ತನ್ ಮೂಳೂರು,ಸದಾಶಿವ ಸಾಲ್ಯಾನ್ ಬೈರಂಪಳ್ಳಿ, ಲಕ್ಷ್ಮೀಕಾಂತ್, ಅಶ್ವಿನ್, ಪ್ರದೀಪ್ ಶೆಟ್ಟಿ, ಬೆಳ್ಳಾರೆ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಹರ್ಷಿತ್,ಸನತ್ ಶೆಟ್ಟಿ ಹಿರಿಯಡ್ಕ,ವಿಜಯ ಶೆಟ್ಟಿ, ನಿತಿನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.