ಪುತ್ತೂರು,ಉಪ್ಪಿನಂಗಡಿ, ಕಡಬ ಠಾಣೆಯ ಮೂವರು ಎಸ್.ಐ.ಗಳ ವರ್ಗಾವಣೆ ಶ್ರೀಕಾಂತ್ ರಾಥೋಡ್ ಪುತ್ತೂರಿಗೆ, ರಾಜೇಶ್ ಕೆ.ವಿ.ಉಪ್ಪಿನಂಗಡಿಗೆ

0

ಪುತ್ತೂರು:ಪುತ್ತೂರು ನಗರ ಪೊಲೀಸ್ ಠಾಣೆ, ಉಪ್ಪಿನಂಗಡಿ ಮತ್ತು ಕಡಬ ಠಾಣೆಯ ಮೂವರು ಎಸ್‌ಐಗಳನ್ನು ವರ್ಗಾವಣೆಗೊಳಿಸಿ ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ದೇವಜ್ಯೋತಿ ರೇ ಆದೇಶ ಹೊರಡಿಸಿದ್ದಾರೆ.

ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜೇಶ್ ಕೆ.ವಿ.ಅವರನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.ಕಡಬ ಠಾಣೆಯ ಶ್ರೀಕಾಂತ್ ರಾಥೋಡ್ ಅವರನ್ನು ಪುತ್ತೂರು ನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಳಿಸಲಾಗಿದೆ.ಉಪ್ಪಿನಂಗಡಿ ಪೊಲೀಸ್ ಠಾಣೆಯ ಕುಮಾರ್ ಕಾಂಬ್ಳೆ ಅವರನ್ನೂ ವರ್ಗಾವಣೆಗೊಳಿಸಲಾಗಿದೆಯಾದರೂ ಅವರಿಗಿನ್ನೂ ಸ್ಥಳ ನಿಯುಕ್ತಿಗೊಳಿಸಿಲ್ಲ ಎಂದು ವರದಿಯಾಗಿದೆ.ಕಡಬ ಪೊಲೀಸ್ ಠಾಣೆಗೂ ನೂತನ ಎಸ್.ಐ.ನೇಮಕವಾಗಿಲ್ಲ.

LEAVE A REPLY

Please enter your comment!
Please enter your name here