ಕುದ್ಮಾರು ಶಾಂತಿಮೊಗರು : ಸಾಮೂಹಿಕ ವರಮಹಾಲಕ್ಷ್ಮಿ ಪೂಜೆ

0

ಕಾಣಿಯೂರು: ಶ್ರೀ ಕ್ಷೇತ್ರ ಧ. ಗ್ರಾ. ಯೋಜನೆ ಪುತ್ತೂರು ಇದರ ಮಾರ್ಗದರ್ಶನದಲ್ಲಿ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿ ಕುದ್ಮಾರು, ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನ ಶಾಂತಿಮೊಗರು, ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಕುದ್ಮಾರು ಇದರ ಸಹಕಾರದೊಂದಿಗೆ 11ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಆ 5ರಂದು ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಸಭಾಭವನದಲ್ಲಿ ಜರಗಿತು. ಪುರೋಹಿತರಾದ ನರಸಿಂಹಪ್ರಸಾದ್ ಪಾಂಗಾಣ್ಣಾಯ ರವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜೆ ಪ್ರಾರಂಭಗೊಂಡು, ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಶಾಂತಿಮೊಗರು ಶ್ರೀ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ, ಕುದ್ಮಾರು ಸಾಮೂಹಿಕ ಶ್ರೀ ವರಮಹಾಲಕ್ಷ್ಮಿ ಪೂಜಾ ಸಮಿತಿಯ ಗೌರವಾಧ್ಯಕ್ಷೆ ಕುಸುಮಾವತಿ ಅಚ್ಚುತ ಗೌಡ ಕಂಪ, ಅಧ್ಯಕ್ಷರಾದ ಲಕ್ಷ್ಮೀ ಜನಾರ್ದನ ಗೌಡ ಹೊಸವೊಕ್ಲು, ಉಪಾಧ್ಯಕ್ಷರಾದ ಚಂದ್ರ ಗೌಡ ತೆಕ್ಕಿತ್ತಡಿ, ಭವಾನಿ ಜನಾರ್ದನ ಗೌಡ ಉಳವ, ಕಾರ್ಯದರ್ಶಿ ಜ್ಞಾನೇಶ್ವರಿ ಚಂದ್ರಶೇಖರ ಗೌಡ ಬರೆಪ್ಪಾಡಿ, ಜತೆ ಕಾರ್ಯದರ್ಶಿಗಳಾದ ಗೀತಾ ಶೇಷಪ್ಪ ಗೌಡ ಕುವೆತ್ತೋಡಿ, ಜಯಂತಿ ಚಂದ್ರಶೇಖರ ದೋಳ, ಕೋಶಾಧಿಕಾರಿ ಪುಷ್ಪಲತಾ ಪದ್ಮಯ್ಯ ಗೌಡ ಕುದ್ಮಾರು ಹಾಗೂ ಸದಸ್ಯರು, ಪ್ರಗತಿ ಬಂಧು ಸ್ವ- ಸಹಾಯ ಸಂಘಗಳ ಒಕ್ಕೂಟ ಕುದ್ಮಾರು ಇದರ ಅಧ್ಯಕ್ಷೆ ಲಲಿತಾ ಈಶ್ವರ್, ಸೇರಿದಂತೆ ಹಲವಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here