ಬೆಟ್ಟಂಪಾಡಿ: ಇಲ್ಲಿನ ಪ್ರಿಯದರ್ಶಿನಿ ವಿದ್ಯಾಸಂಸ್ಥೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಅಂಗವಾಗಿ ನಡೆಯುವ ‘ಶ್ರೀಕೃಷ್ಣ ಲೋಕ’ ವಿಶೇಷ ಕಾರ್ಯಕ್ರಮದ ಪೂರ್ವಭಾವಿ ಸಭೆಯು ಆ. 4 ರಂದು ಶಾಲೆಯಲ್ಲಿ ನಡೆಯಿತು. ಇದೇ ವೇಳೆ ಶ್ರೀಕೃಷ್ಣ ಲೋಕ ಕಾರ್ಯಕ್ರಮ ಸಮಿತಿ ರಚನೆ ಮಾಡಲಾಯಿತು. ಅಧ್ಯಕ್ಷರಾಗಿ ಪುತ್ತೂರಿನ ಕಟ್ಟಾವು ಇನ್ಶೂರೆನ್ಸ್ ಮತ್ತು ವಾಯುಮಾಲಿನ್ಯ ತಪಾಸಣಾ ಕೇಂದ್ರದ ಮಾಲಕ ಸತೀಶ್ ರೈ ಕಟ್ಟಾವು ಹಾಗೂ ಉಪಾಧ್ಯಕ್ಷರಾಗಿ ರೋಟರಿ ಕ್ಲಬ್ ಪುತ್ತೂರು ಸ್ವರ್ಣ ಇದರ ಕೋಶಾಧಿಕಾರಿಯೂ ಆಗಿರುವ ಸನತ್ ಕುಮಾರ್ ರೈ ‘ಸಂಗಮ್’ ತೋಟದಮೂಲೆ ಇವರು ಆಯ್ಕೆಯಾದರು. ಸದಸ್ಯರಾಗಿ ಶಿವಕುಮಾರ್ ಬಲ್ಲಾಳ್, ಜಗನ್ನಾಥ ರೈ ಕೊಳಂಬೆತ್ತಿಮಾರು, ಪ್ರೇಮ, ದಿವ್ಯ, ವಿಜಯಲಕ್ಷ್ಮಿ, ಶುಭಾಷಿಣಿ, ತೃಪ್ತಿ, ತೇಜಸ್ವಿನಿ, ಶಾಲಿನಿ, ಸ್ವಾತಿ ಯವರು ಆಯ್ಕೆಯಾದರು. ಶಾಲಾ ಸಂಚಾಲಕ ಡಾ.ಸತೀಶ್ ರಾವ್, ಆಡಳಿತ ಮಂಡಳಿಯ ಕೋಶಾಧಿಕಾರಿ ಕರುಣಾಕರ ಶೆಟ್ಟಿ ಕೊಮ್ಮಂಡ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ, ಮುಖ್ಯಗುರು ರಾಜೇಶ್ ಎನ್., ಶಿಕ್ಷಕರು ಉಪಸ್ಥಿತರಿದ್ದರು.