ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದಿಂದ ಆಟಿಡೊಂಜಿ ದಿನ

0

ಪುತ್ತೂರು : ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ವತಿಯಿಂದ ಆಟಿಡೊಂಜಿ ದಿನ ತುಳುವೆರೆ ಕಲಾಕೂಟ ಕಾರ್ಯಕ್ರಮ ಪಕ್ಷದ ಕಛೇರಿಯಲ್ಲಿ ನಡೆಯಿತು. ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಸಮಾರಂಭ ಉದ್ಘಾಟಿಸಿದರು. ಕಾಂಗ್ರೆಸ್ ನಾಯಕ, ವಕೀಲ ಕುಂಬ್ರ ದುರ್ಗಾಪ್ರಸಾದ್ ರೈ, ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಎಂ.ಬಿ. ವಿಶ್ವನಾಥ ರೈಯವರು ಶುಭ ಹಾರೈಸಿದರು.

ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ಅರಸ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾದನಾಡಿದರು. ನಗರ ಕಾಂಗ್ರೆಸ್ ಅದ್ಯಕ್ಷ ಮಹಮ್ಮದ್ ಆಲಿ, ಕಾರ್ಮಿಕ ಘಟಕದ ಅದ್ಯಕ್ಷ ಶರೂನ್ ಸಿಕ್ವೇರಾ, ಸೇವಾದಳ ಅದ್ಯಕ್ಷ ವಿಶ್ವಜಿತ್ ಅಮ್ಮುಂಜ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಸನತ್ ರೈ ಕುರಿಯ, ಜಯಂತಿ ಬಲ್ನಾಡ್, ಮಹಿಳಾ ಕಾಂಗ್ರೆಸ್ ರಾಜ್ಯ ನಾಯಕಿ ಸಾಯಿರಾ ಝಬೇರ್, ಉದ್ಯಮಿ ಶಿವರಾಮ ಅಳ್ವ, ಬ್ಲಾಕ್ ಉಪಾದ್ಯಕ್ಷ ಮೌರಿಸ್ ಮಸ್ಕರೇನಸ್, ಮಹಾಬಲ ರೈ ವಳತ್ತಡ್ಕ, ಬ್ಲಾಕ್ ಕಾರ್ಯದರ್ಶಿಗಳಾದ ಹಬೀಬ್ ಕಣ್ಣೂರು, ರೋಶನ್ ರೈ ಬನ್ನೂರು, ಮಹಿಳಾ ಕಾಂಗ್ರೆಸ್ ಜಿಲ್ಲಾ ನಾಯಕಿ ವಿಜಯಲಕ್ಷ್ಮೀ, ಮಹಿಳಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸೀತಾ ಉದಯಶಂಕರ್, ಶುಭಮಾಲಿನಿ, ಸನಂ ನಝೀರ್, ಮೈಮುನತ್ ಮೆಹ್ರಾ, ನೆಬಿಸಾ, ಗ್ರಾ.ಪಂ.ಸದಸ್ಯೆ ಶುಭಲತಾ ಜೆ. ರೈ, ಭವಾನಿ. ಪಿ., ಮಾಜಿ ನಗರ ಸಭಾ ಸದಸ್ಯೆ ಉಷಾ ಧನಂಜಯ್, ಚಂದ್ರಕಲಾ, ರೋಸ್ಲಿಮರೀಲ್, ಸಿಂಥಿಯಾ ಡಿ. ಸೋಜ, ಜೊನಿಟಾ ಡಿ ಸೋಜ, ಸುಂದರಿ ಒಳಮೊಗ್ರು, ಗ್ರೆಟ್ಟಾ ಡಿ. ಸೋಜ, ಬಿ.ಸಿ. ಚಿತ್ರಾ, ಗ್ರಾ. ಪಂ. ಸದಸ್ಯೆ ಶಾರದಾ ಒಳಮೊಗ್ರು, ಪ್ರತೀಕ್ಷಾ ಜಿ. ಉಪಸ್ಥಿತರಿದ್ದರು. ಕಲಾವತಿ ಗೌಡ ವಂದಿಸಿದರು.

LEAVE A REPLY

Please enter your comment!
Please enter your name here