ಆಲಂಕಾರು: ಪೆರಾಬೆ ಗ್ರಾ.ಪಂ ಗ್ರಂಥಾಲಯದಲ್ಲಿ ದ.ಕ ಜಿ.ಪ .ಉ. ಹಿ.ಪ್ರಾ ಶಾಲೆ ಕುಂತೂರು ಹಾಗು ದ.ಕ .ಜಿ.ಪ.ಹಿ.ಪ್ರಾ.ಶಾಲೆ ಕುಂತೂರು ಪದವಿನ ವಿದ್ಯಾರ್ಥಿಗಳಿಗೆ ಚದುರಂಗ ಸ್ಪರ್ದೆಯನ್ನು ಪೆರಾಬೆ ಗ್ರಾ.ಪಂ ಗ್ರಂಥಾಲಯದಲ್ಲಿ ಚದುರಂಗ ಸ್ಪರ್ದೆಯನ್ನು ಏರ್ಪಡಿಸಲಾಗಿತ್ತು. ಪೆರಾಬೆ ಗ್ರಾ.ಪಂ ಮಾಜಿ ಅಧ್ಯಕ್ಷರು ಹಾಗು ಹಾಲಿ ಸದಸ್ಯರಾದ ಚಂದ್ರಶೇಖರ ರೈ ಅಗತ್ತಾಡಿ ದೀಪ ಬೆಳಗಿಸಿ ಉದ್ಘಾಟಿಸಿ ಶುಭಹಾರೈಸಿದರು.
ಪಂಚಾಯತ್ ಅಭಿವೃದ್ದಿ ಅಧಿಕಾರಿ ಶಾಲಿನಿ ಚದುರಂಗ ಸ್ಪರ್ದೆಯ ಬಗ್ಗೆ ತಿಳಿಸಿದರು. ಚದುರಂಗ ಸ್ಪರ್ದೆಯಲ್ಲಿ ಒಟ್ಟು 17 ಮಂದಿ ವಿದ್ಯಾರ್ಥಿಗಳು ಭಾಗವಹಿಸಿದ್ದರು.ಸ್ಪರ್ದೆಯಲ್ಲಿ ದ.ಕ .ಜಿ.ಪ ಉ.ಹಿ.ಪ್ರಾ ಶಾಲೆಯ ರಕ್ಷಿತ್ ಪ್ರಥಮ,ದ್ವಿತೀಯ ಹರ್ಷ ಭಟ್ಟ್,ತೃತೀಯ ತನ್ವೀರ್ ಬಹುಮಾನ ಪಡೆದರು. ಪೆರಾಬೆ ಗ್ರಾ.ಪಂ ಅಧ್ಯಕ್ಷರಾದ ಮೋಹನದಾಸ ರೈ ಪರಾರಿಗುತ್ತು ಬಹುಮಾನ ನೀಡಿ ಪ್ರಮಾಣ ಪತ್ರ ವಿತರಿಸಿ ಶುಭಾಹಾರೈಸಿದರು. ಶಾಲಾ ದೈಹಿಕ ಶಿಕ್ಷಕರಾದ ನೀಲಮ್ಮ, ಸಹಶಿಕ್ಷಕರಾದ ಕೇಶವ ಕಾರ್ಯಕ್ರಮದಲ್ಲಿ ಸಹಕರಿಸಿದರು. ಪೆರಾಬೆ ಗ್ರಾ.ಪಂ ಗ್ರಂಥಪಾಲಕಿ ಜಯಕುಮಾರಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ,ಧನ್ಯವಾದ ಸಮರ್ಪಿಸಿದರು .ಪಂಚಾಯತ್ ಸಿಬ್ಬಂದಿಗಳು ಸಹಕರಿಸಿದರು. ಗ್ರಾ.ಪಂ ಸದಸ್ಯರಾದ ಕುಮಾರ,ರಾಜು.ಕೆ,ಕೃಷ್ಣ ರವರು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು