ಕೊಂಬೆಟ್ಟು ಶಾಲೆಯ ಅಪಾಯದ ಆವರಣಗೋಡೆ ತೆರೆವು- ತಾತ್ಕಾಲಿಕ ತಂತಿ ಬೇಲಿ ಅಳವಡಿಕೆ

0


ಪುತ್ತೂರು: ಬೀಳುವ ಸ್ಥಿತಿಯಲ್ಲಿದ್ದ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಆವರಣಗೋಡೆಯನ್ನು ಆ.6ರಂದು ತೆರವು ಮಾಡಿ ತಾತ್ಕಾಲಿಕ ತಂತಿ ಬೇಲಿ ಅಳವಡಿಸು ಕಾರ್ಯ ನಡೆಯಿತು.

ಕೊಂಬೆಟ್ಟು ಶಾಲೆಯ ಪಕ್ಕದಿಂದ ಹಾದು ಹೋಗುವ ರಸ್ತೆಯ ಭಾಗದಲ್ಲಿ ಶಾಲೆಯ ಆವರಣಗೋಡೆ ವಾಲಿ ಬೀಳುವ ಸ್ಥಿತಿಯಲ್ಲಿದ್ದು, ಮುಂದೆ ಅಪಾಯ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಆವರಣಗೋಡೆಯನ್ನು ತೆರವು ಮಾಡಲಾಯಿತು. ಇದೀಗ ಆವರಣಗೋಡೆಯ ಕಲ್ಲುಗಳನ್ನು ತೆಗೆದು ಅಲ್ಲಿ ತಂತಿ ಬೇಲಿ ಅಳವಡಿಸಲಾಗಿದೆ. ಶಾಲೆಯ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ನಗರಸಭೆ ಸ್ಥಳೀಯ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಶಾಲೆಯ ಉಪಪ್ರಾಂಶುಪಾಲ ವಸಂತ ಮೂಲ್ಯ ಸೇರಿದಂತೆ ಶಾಲೆಯ ಎಸ್.ಡಿ.ಎಮ್.ಸಿ ಸದಸ್ಯರ ಉಪಸ್ಥಿತಿಯಲ್ಲಿ ಕಾಮಗಾರಿ ನಡೆಸಲಾಯಿತು.

LEAVE A REPLY

Please enter your comment!
Please enter your name here