ಪುತ್ತೂರು: ದ ಕ ಜಿಲ್ಲಾ ಕೇಂದ್ರ ಸಹಕಾರಿ ಸಂಘದ ವತಿಯಿಂದ ಪ್ರಶಸ್ತಿಗೆ ಬಾಜನರಾದ ಪುತ್ತೂರು ಬ್ಲಾಕ್ ವ್ಯಾಪ್ತಿಯ 4 ಸಹಕಾರಿ ಸಂಘದ ಕಾಂಗ್ರೆಸ್ ಆಡಳಿತದ ಅಧ್ಯಕ್ಷರುಗಳಿಗೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸನ್ಮಾನಿಸಲಾಯಿತು.
ಅರ್ಯಾಪು ಸಹಕಾರಿ ಸಂಘದ ಅಧ್ಯಕ್ಷ ಎಚ್ ಮಹಮ್ಮದ್ ಅಲಿ, ಮುಂಡೂರು ಸಹಕಾರಿ ಸಂಘದ ಅಧ್ಯಕ್ಷ ಸುರೇಶ ಕುಮಾರ್ ಸೊರಕೆ, ನೆರಿಮೊಗರು ಸಹಕಾರಿ ಸಂಘದ ಅಧ್ಯಕ್ಷ ಬಾಬು ಶೆಟ್ಟಿ, ಕೊಳ್ತಿಗೆ ಸಹಕಾರಿ ಸಂಘದ ಅಧ್ಯಕ್ಷ ವಸಂತಕುಮಾರ್ ಜೆ ಕೆ ರವರನ್ನು ಮಾಜಿ ಶಾಸಕಿ ಶ್ರೀಮತಿ ಶಕುಂತಲಾ ಟಿ ಶೆಟ್ಟಿಯವರು ಸನ್ಮಾನಿಸಿದರು
ಬ್ಲಾಕ್ ಕಾಂಗ್ರೆಸ್ ಮಾಸಿಕ ಸಭೆಯಲ್ಲಿ ನಡೆದ ಈ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ಲಾಕ್ ಅಧ್ಯಕ್ಷರಾದ ಎಂ ಬಿ ವಿಶ್ವನಾಥ್ ರೈ ಯವರು ವಹಿಸಿದ್ದರು,
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ವಕ್ತಾರ ಮಹಮ್ಮದ್ ಬಡಗನ್ನೂರು, ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷರುಗಳಾದ ಮೌರಿಸ್ ಮಸ್ಕರೇನಸ್, ದಿನೇಶ್ ಪಿ ವಿ, ಆಲಿಕುಂಹಿ ಕೊರಿಂಗಿಲ, ಶಶಿಕಿರಣ್ ರೈ,ಶ್ರೀಮತಿ ವಿಶಾಲಾಕ್ಷಿ ಬನ್ನೂರು ,ಮಹಾಬಲ ರೈ ಒಳತಡ್ಕ,ಪ್ರದಾನ ಕಾರ್ಯದರ್ಶಿ ಪೂರ್ಣೇಶ್ ಭಂಡಾರಿ, ಕಾರ್ಯದರ್ಶಿಗಳಾದ ಪವನ್ ಡಿ ಜಿ, ಅಬೀಬ್ ಕಣ್ಣೂರು,ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಶಾರದಾ ಅರಸ್,ಎಸ್ ಟಿ ಘಟಕದ ಅಧ್ಯಕ್ಷ ಮಹಾಲಿಂಗ ನಾಯ್ಕ್, ಕಾರ್ಮಿಕ ಘಟಕದ ಅಧ್ಯಕ್ಷ ಶಾರೋನ್ ಸಿಕ್ವೆರಾ, ಹಿಂದುಳಿದ ವರ್ಗದ ಅಧ್ಯಕ್ಷ ಹರೀಶ್ ಕೋಟ್ಯಾನ್, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಮೆಲ್ವಿನ್ ಮೊಂತೆರೊ, ಪಂಚಾಯತ್ ರಾಜ್ ಸಂಘಟನೆಯ ಅಧ್ಯಕ್ಷ ಸಂತೋಷ ಭಂಡಾರಿ ಚಿಲ್ಮೆತ್ತಾರ್,ಸಾಮಾಜಿಕ ಜಾಲತಾಣದ ಅಧ್ಯಕ್ಷ ಸಿದ್ದಿಕ್ ಸುಲ್ತಾನ್ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಾಲಕೃಷ್ಣ ಗೌಡ ಕೆಮ್ಮಾರ, ಕಾಂಗ್ರೆಸ್ ಮುಖಂಡರುಗಳಾದ ಜಗಮೋಹನ್ ರೈ, ರಾಮ ಮೇನಲ,ಉಮ್ಮರ್ ಜನಪ್ರಿಯ, ಅಬೂಬಕ್ಕರ್ ಶಾಫಿ, ಶ್ರೀಮತಿ ಅಸ್ಮಾ ಗಟ್ಟಮನೆ, ಇಬ್ರಾಹಿಂ ಮೈರೋಳ್, ಭಾಸ್ಕರ ಕರ್ಕೇರ, ಮನೋಹರ್ ರೈ ಎಂಡೆಸಾಗು, ನಾರಾಯಣ ನಾಯ್ಕ್ ಪಾನಾಜೆ, ಕೆ ಎಸ್ ವೆಂಕಟರಮಣ ಗೌಡ ಕೊಳ್ತಿಗೆ, ಶಿವರಾಮ ಮಣಿಯಾನಿ, ವಲಯ ಕಾಂಗ್ರೆಸ್ ಅಧ್ಯಕ್ಷರಾದ ಅಶೋಕ್ ಕುಮಾರ್ ಬೊಲ್ಲಾಡಿ, ಸುಪ್ರೀತ್ ಕಣ್ಣಾರಾಯ, ಸನತ್ ರೈ ಕುರಿಯ, ನವೀನ್ ರೈ ಚೆಲ್ಯಡ್ಕ,ಮೊದಲಾದವರು ಉಪಸ್ಥಿತರಿದ್ದರು,
ಅಮಳ ರಾಮಚಂದ್ರ, ಬಾಬು ಮರಿಕೆ ಕಾರ್ಯಕ್ರಮ ನಿರೂಪಣೆ ಮಾಡಿದರು