ನಿಡ್ಪಳ್ಳಿ; ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ ಬೆಟ್ಟಂಪಾಡಿ ವಲಯ ನಿಡ್ಪಳ್ಳಿ ಒಕ್ಕೂಟದ ಮಾಸಿಕ ಸಭೆ ಅಧ್ಯಕ್ಷ ರಾಧಾಕೃಷ್ಣ ಪಾಟಾಳಿ.ಕೆ ಇವರ ಅಧ್ಯಕ್ಷತೆಯಲ್ಲಿ ಅ.7 ರಂದು ನಿಡ್ಪಳ್ಳಿ ಶಾಲೆಯಲ್ಲಿ ನಡೆಯಿತು.
ಸೇವಾ ಪ್ರತಿನಿಧಿ ಜಗನ್ನಾಥ ಪಾಟಾಳಿ ಯೋಜನೆಯ ಮಾಹಿತಿ ನೀಡಿದರು. ಪ್ರಗತಿಬಂಧು ತಂಡಗಳು ಪ್ರತಿ ವಾರ ಶ್ರಮವಿನಿಮಯ ಮಾಡುವ ಬಗ್ಗೆ ಮತ್ತು ಸ್ವಸಹಾಯ ಸಂಘಗಳು ವಾರದ ಸಭೆಯನ್ನು ಕ್ರಮಬದ್ದವಾಗಿ ನಡೆಸುವ ಬಗ್ಗೆ ಚರ್ಚಿಸಲಾಯಿತು. ಧಾರ್ಮಿಕ ಕ್ಷೇತ್ರ ಸ್ವಚ್ಚತಾ ಕಾರ್ಯಕ್ರಮದಡಿಯಲ್ಲಿ ಗುತ್ತು ಚಾವಡಿ ಪರಿಸರ ಮತ್ತು ಉಳ್ಳಾಕುಲು ಮಾಡದ ವಠಾರವನ್ನು ಅ.13 ರಂದು ಸ್ವಚ್ಚ ಗೊಳಿಸುವುದೆಂದು ನಿರ್ಣಯಿಸಲಾಯಿತು. ಹಾಜರಾದ ತಂಡಗಳಿಗೆ ಗ್ರೇಡಿಂಗ್ ಹಾಕಲಾಯಿತು. ಒಕ್ಕೂಟದ ಕಾರ್ಯದರ್ಶಿ ಶ್ರೀಮತಿ ಸ್ವಾಗತಿಸಿ ಒಕ್ಕೂಟದ ವರದಿ ವಾಚಿಸಿದರು. ಜವಾಬ್ದಾರಿ ತಂಡ ಶ್ರೀವಿದ್ಯಾ ತಂಡದ ಸೀತಾ ತಂಡದ ವರದಿ ವಾಚಿಸಿದರು.ಶ್ರೀವಿದ್ಯಾ ತಂಡದ ಶಾಲಿನಿ ವಂದಿಸಿದರು. ಒಕ್ಕೂಟದ ಜತೆ ಕಾರ್ಯದರ್ಶಿ ಹೇಮಾ ಸಿ.ಎಚ್, ಕೋಶಾಧಿಕಾರಿ ತಿಮ್ಮಪ್ಪ .ಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.