ಪುತ್ತೂರು: ದರ್ಬೆತ್ತಡ್ಕದಲ್ಲಿ ತೋಟದ ಕೆರೆಗೆ ರಬ್ಬರ್ ಟ್ಯಾಪರ್ ಒಬ್ಬರು ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಆ.7ರ ರಾತ್ರಿ ನಡೆದ ಬಗ್ಗೆ ವರದಿಯಾಗಿದೆ.
ಕೇರಳ ಮೂಲದ ಕಾರ್ಮಿಕ ದರ್ಬೆತ್ತಡ್ಕದಲ್ಲಿ ಬಾಡಿಗೆ ಮನೆಯೊಂದರಲ್ಲಿದ್ದು ಸ್ಥಳೀಯವಾಗಿ ರಬ್ಬರ್ ಟ್ಯಾಪಿಂಗ್ ಕೆಲಸ ನಿರ್ವಹಿಸುತ್ತಿರುವ ಶನೂಶ್(23ವ) ಎಂಬವರು ಮೃತಪಟ್ಟವರು. ಅವರು ಸಂಜೆವೇಳೆ ತನ್ನ ಪರಿಚಯಸ್ಥರೊಂದಿಗೆ ಬಾಲಕೃಷ್ಣ ಆಚಾರ್ಯ ಎಂಬವರ ತೋಟದ ಕೆರೆಯಲ್ಲಿ ಸ್ನಾನಕ್ಕೆ ಇಳಿದಾಗ ಆಕಸ್ಮಿಕವಾಗಿ ಬಿದ್ದು ಮೃತಪಟ್ಟಿದ್ದಾರೆ. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ. ಘಟನಾ ಸ್ಥಳಕ್ಕೆ ಸಂಪ್ಯ ಪೊಲೀಸರು ತೆರಳಿ ಮಾಹಿತಿ ಪಡೆದು ಕೊಂಡಿದ್ದಾರೆ.