ಪುತ್ತೂರು : ಈಶ್ವರಮಂಗಲ ಹಿಂದು ಜಾಗರಣ ವೇದಿಕೆ ವತಿಯಿಂದ ಪ್ರವೀಣ್ ನೆಟ್ಟಾರುರವರಿಗೆ ಶ್ರದ್ಧಾಂಜಲಿ ಸಭೆ ಈಶ್ವರಮಂಗಲ ಪಂಚಲಿಂಗೇಶ್ವರ ಸಭಾ ಭವನದಲ್ಲಿ ನಡೆಯಿತು. ಪ್ರವೀಣ್ ನೆಟ್ಟಾರುರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು. ಹಿಂದೂ ಜಾಗರಣ ವೇದಿಕೆ ದಕ್ಷಿಣ ಪ್ರಾಂತ ಯುವ ವಾಹಿನಿ ಸಹಪ್ರಮುಖ್ ಚಿನ್ಮಯ್ ಈಶ್ವರಮಂಗಲ, ಹಿರಿಯರಾದ ಪೂರ್ಣತ್ಮ ರಾಮ್ ಈಶ್ವರಮಂಗಲ , ರಾಜೇಂದ್ರ ಪ್ರಸಾದ್ ರೈ ಮೇನಾಲ ನುಡಿನಮನ ಸಲ್ಲಿಸಿದರು. ಹಿರಿಯರಾದ ನಿವೃತ್ತ ಅಧ್ಯಾಪಕ ರಾಮಣ್ಣ ರೈ, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಸಹ ಸಂಯೋಜಕ ರಾಜೇಶ್ ಪಂಚೋಡಿ, ತಾಲೂಕ್ ಸಂಪರ್ಕ ಪ್ರಮುಖ ಪ್ರಜ್ವಲ್, ದೀಪಕ್ ಮುಂಡ್ಯ, ಸತೀಶ್ ಸುರುಲಿಮೂಳೆ, ಚಂದ್ರಹಾಸ, ಗೌರೀಶ್, ಹರೀಶ್ ಬಾಬು, ಚಂದ್ರ ಟೈಲರ್ ಸೇರಿದಂತೆ ಸಂಘಟನೆ ಮತ್ತು ಸಂಘ ಪರಿವಾರದ ಕಾರ್ಯಕರ್ತರು ಉಪಸ್ಥಿತರಿದ್ದರು.