ಪುತ್ತೂರು: ನಾವೆಲ್ಲ ದೇಶ ಮೊದಲು ಎಂದು ಹೇಳುವವರು. ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷಕ್ಕಿಂತ ದೇಶ ದೊಡ್ಡದು. ಈ ಮಾತನ್ನು ಭಾಷಣದಲ್ಲಿ ಮಾತ್ರ ಹೇಳುವುದಲ್ಲ ಕಾರ್ಯದಲ್ಲೂ ಮಾಡಿ ತೋರಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಆ.13ರಂದು ಮನೆ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುವ ನಿಟ್ಟಿನಲ್ಲಿ ಪುತ್ತೂರು ಬಿಜೆಪಿ ಕಚೇರಿಯಲ್ಲಿ ವಿಧಾನಸಭಾಕ್ಷೇತ್ರದ 220 ಬೂತ್ನ ಪದಾಧಿಕಾರಿಗಳಿಗೆ ತ್ರಿವರ್ಣ ಧ್ವಜ ಹಸ್ತಾಂತರಿಸಿ ಪದಾಧಿಕಾರಿಗಳು, ಕಾರ್ಯಕರ್ತರು ಯಾವ ರೀತಿ ತ್ರಿವರ್ಣ ಧ್ವಜಕ್ಕೆ ಗೌರವ ನೀಡಬೇಕೆಂದು ಅವರು ವಿವರಿಸಿದರು. ನಾವು ರಾಷ್ಟ್ರಪ್ರೇಮ, ರಾಷ್ಟ್ರಭಕ್ತಿಯನ್ನು ಉದ್ದೀಪನಗೊಳಿಸುವ ದೃಷ್ಟಿಯಿಂದ
ಅಮೃತ ಮಹೋತ್ಸವನ್ನು ಹೇಗೆ ಆಚರಣೆ ಮಾಡುವುದು. ಈ ಆಚರಣೆ ಬಿಜೆಪಿ ಕೊಡುಗೆ ಏನು ಎಂಬುದನ್ನು ನಮ್ಮೆಲ್ಲ ಪದಾಧಿಕಾರಿಗಳು ಸೇರಿಕೊಂಡು ಬೂತ್ ಮಟ್ಟದಲ್ಲಿ. ಒಂದು ಸಭೆಯನ್ನು ಮಾಡಬೇಕು. ಪ್ರತಿ ಬೂತ್ನಲ್ಲಿ ಮನೆ ಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಬೇಕೆಂದು ಸರಕಾರವೇ ಹಳ್ಳಿಯಲ್ಲಿರುವ ಪೋಸ್ಟ್ ಆಫೀಸ್, ಗ್ರಾ.ಪಂನಲ್ಲಿ ರಾಷ್ಟçಧ್ವಜವನ್ನು ಮಾರಾಟಕ್ಕಿಟ್ಟಿದೆ. ಇಂತಹ ಸಂದರ್ಭದಲ್ಲಿ ಪಕ್ಷದ ಜವಾಬ್ದಾರಿಯನ್ನು ಅರಿಯಬೇಕು. ರಾಷ್ಟçಮೊದಲು ಎಂದು ಹೇಳುವ ಕಾರ್ಯಕರ್ತ ರಾಷ್ಟ್ರಧ್ವಜನ್ನು ಮೊದಲು ತನ್ನ ಮನೆಯಲ್ಲಿ ಹಾರಿಸಿದಾಗ ಇಡಿ ಜನರಿಗೆ ಸಂದೇಶ ಕೊಡಲು ಸಾಧ್ಯ ಎಂದರು. ಅ.13ಕ್ಕೆ ಪ್ರಧಾನಿಯವರು ಸೂಚನೆ ಕೊಟ್ಟಾಗ ಎಲ್ಲರು ಧ್ವಜರೋಹಣ ಮಾಡಬೇಕು ಅದೇ ರೀತಿ ಧ್ವಜಕ್ಕೆ ಅಗೌರವ ಆಗದಂತೆ ಎಚ್ಚರಿಕೆಯ ಭಾಗವನ್ನೂ ಗಮನಿಸಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬೂಡಿಯಾರ್ ರಾಧಾಕೃಷ್ಣ ರೈ, ಗ್ರಾಮಾಂತರ ಮಂಡಲದ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ನಗರ ಮಂಡಲದ ಅಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್, ಪ್ರಧಾನ ಕಾರ್ಯದರ್ಶಿಗಳಾದ ಪುರುಷೊತ್ತಮ ಮುಂಗ್ಲಿಮನೆ, ಯುವರಾಜ್, ಜಯಶ್ರೀ ಎಸ್ ಶೆಟ್ಟಿ ಮತ್ತು ಮಹಾಶಕ್ತಿ ಕೇಂದ್ರ ಮತ್ತು ಬೂತ್ ಮಟ್ಟದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ನಿತೀಶ್ ಶಾಂತಿವನ ತ್ರಿವರ್ಣ ಧ್ವಜವನ್ನು ಯಾವ ರೀತಿ ಮಡಚಿ ಇಡಬೇಕೆಂದು ಮಾಹಿತಿ ನೀಡಿದರು.
Home ಚಿತ್ರ ವರದಿ ದೇಶ ದೊಡ್ಡದು ಎಂದು ಭಾಷಣದಲ್ಲಿ ಮಾತ್ರವಲ್ಲ ಕಾರ್ಯದಲ್ಲೂ ಮಾಡಿ ತೋರಿಸಬೇಕು- ಬಿಜೆಪಿ ಬೂತ್ಗಳಿಗೆ ತ್ರಿವರ್ಣ ಧ್ವಜ...