ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷ ವೇಣುಗೋಪಾಲ್ ಗೌಡ ನಿಧನ

0

ಪುತ್ತೂರು: ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದ ಅಧ್ಯಕ್ಷ ಹಾಗೂ ಹಿರಿಯ ಕಾಂಗ್ರೆಸ್ಸಿಗ ವೇಣುಗೋಪಾಲ್ ಗೌಡ(65ವ.)ರವರು ಅಲ್ಪಕಾಲದ ಅಸೌಖ್ಯದಿಂದ ಆ.9 ರಂದು ಮುಂಜಾನೆ ನಸುಕಿನ ವೇಳೆ ನಿಧನ ಹೊಂದಿದ್ದಾರೆ.

ಮೃತ ವೇಣುಗೋಪಾಲ್ ಗೌಡರವರು ಮೊಟ್ಟೆತ್ತಡ್ಕ ಮಿಶನ್ ಮೂಲೆ ಶ್ರೀ ಚಾಮುಂಡೇಶ್ವರಿ ದೇವಸ್ಥಾನದಲ್ಲಿ 35 ವರ್ಷಕ್ಕೂ ಮೇಲ್ಪಟ್ಟು ಸೇವೆ ಸಲ್ಲಿಸಿದ್ದು ಸುಮಾರು 20 ವರ್ಷಗಳಿಂದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದರು. ವೇಣುಗೋಪಾಲ್ ಗೌಡರವರು ಪುತ್ತೂರು ಹಳೆಯ ಬಸ್ಸು ನಿಲ್ದಾಣದಲ್ಲಿ ಪ್ರಶಾಂತ್ ಸ್ಟಾಲ್ ಹೆಸರಿನಲ್ಲಿ ವ್ಯವಹಾರ ನಡೆಸುತ್ತಾ ಚಿರಪರಿಚಿತರಾಗಿದ್ದರು. ಹಿರಿಯ ಕಾಂಗ್ರೆಸ್ಸಿಗರಾಗಿದ್ದು, ಪುತ್ತೂರು ಪುರಸಭೆಯ ಚುನಾವಣೆ ಸಂದರ್ಭದಲ್ಲಿ ವಾರ್ಡ್ ಕೌನ್ಸಿಲರ್ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಅಲ್ಲದೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶ್ರೀ ಚಾಮುಂಡೇಶ್ವರಿ ಸಂಘದ ಅಧ್ಯಕ್ಷರಾಗಿ, ಭೂಮಿಕಾ ಒಕ್ಕೂಟ ಕೆಮ್ಮಿಂಜೆ ಮಾಜಿ ಅಧ್ಯಕ್ಷರಾಗಿ, ಪುತ್ತೂರು ವಲಯದ ಅಧ್ಯಕ್ಷರಾಗಿ, ಮೊಟ್ಟೆತ್ತಡ್ಕ ನವೋದಯ ಯುವಕ ಮಂಡಲ, ವಿಶ್ವ ಯುವಕ ಮಂಡಲದ ಸದಸ್ಯರಾಗಿ ಕಾರ್ಯ ನಿರ್ವಹಿಸಿದ್ದರು.

ಮೃತರು ಪತ್ನಿ ಕುರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಪ್ರೇಮಾ ಕೆ, ಪುತ್ರ ಹರ್ಷಿತ್, ಪುತ್ರಿಯರಾದ ವಿದ್ಯಾಶ್ರೀ, ಸುಶ್ಮಿತಾ, ಸಹೋದರ ಭಾಸ್ಕರ ಗೌಡ ಆರಂತೋಡು ಸುಳ್ಯ, ಸಹೋದರಿಯರಾದ ಶಿವಮ್ಮ ಮೊಟ್ಟೆತ್ತಡ್ಕ, ಮೋಹಿನಿ ಮೊಟ್ಟೆತ್ತಡ್ಕ, ತಾರಾ ಜಾಲ್ಸೂರು ಬೆಳ್ಳಿಪ್ಪಾಡಿರವರನ್ನು ಅಗಲಿದ್ದಾರೆ.

ಮೃತರ ಅಂತಿಮ ಕ್ರಿಯೆಯು ಆ.9 ರಂದು ಬೆಳಿಗ್ಗೆ 11 ಗಂಟೆಗೆ ಮೃತರ ಹುಟ್ಟೂರಾದ ಸುಳ್ಯ ಆರಂತೋಡು ಕಿರ್ಲಾಯದಲ್ಲಿ ಜರಗಲಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

LEAVE A REPLY

Please enter your comment!
Please enter your name here