ಪುತ್ತೂರು : ಕೇರಳ ಮತ್ತು ಕರ್ನಾಟಕದಲ್ಲಿ ಪ್ರಖ್ಯಾತ ಕಂಪನಿಗಳ ಟಯರ್ ಮಾರಟ ಮಳಿಗೆ ಹೊಂದಿರುವ ಪಾಸ್ಟ್ ಟ್ರ್ಯಾಕ್ ಇಂಡಿಯಾ ಇದರ ನೂತನ ಮಳಿಗೆ ಪುತ್ತೂರಿನ ಬೈಪಾಸ್ ರಸ್ತೆಯ ಉರ್ಲಾಂಡಿ ಎಸ್ಜಿಕೆ ಕಾಂಪ್ಲೆಕ್ಸ್ನಲ್ಲಿ ಅ.೧೧ ರಂದು ಶುಭಾರಂಭಗೊಂಡಿತು. ಮಳಿಗೆಯನ್ನು ಕಾಸರಗೋಡು ಪಿಬಿ ಗ್ರೂಪ್ಸ್ ಆಡಳಿತ ನಿರ್ದೇಶಕ ಪಿಬಿ ಅಹಮದ್ ಉದ್ಘಾಟಿಸಿದರು.
ಮ್ಯಾಗ್ ವೀಲ್ ಎಲೈಮೆಂಟ್ ಮಿಷನ್ಗೆ ಯುವ ಉದ್ಯಮಿ ಹರೀಶ್ ಕಾಮತ್ ಚಾಲನೆ ನೀಡಿದರು. ವಾಯು ತಪಾಸಣೆ ಘಟಕವನ್ನು ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಪಿ.ಬಿ ಶಫೀಕ್ ಉದ್ಘಾಟಿಸಿದರು. ಉದ್ಘಾಟನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಟ್ಟಡ ಮಾಲಕರಾದ ಕೃಷ್ಣ ಕಾಮತ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ಪಾಲುದಾರರು ಉದ್ಯಮಿ ಹಾರೀಸ್ ಅಬೂಭಕ್ಕರ್ ರವರನ್ನು ಹಾಗೂ ಕಟ್ಟಡ ಮಾಲಕ ಕೃಷ್ಣ ಕಾಮತ್ರವರನ್ನು ಸನ್ಮಾನಿಸಿ ಗೌರವಿಸಿದರು.
ಸುಳ್ಯ ವರ್ತಕರ ಸಂಘದ ಅಧ್ಯಕ್ಷ ಪಿ.ಬಿ ಸುಧಾಕರ ರೈ, ಕಾಸರಗೋಡು ಉದ್ಯಮಿಗಳಾದ ಅಚ್ಚು ನಾಯ್ಮರಮೂಲೆ, ಚಾಲ ಇಬ್ರಾಹಿಂ, ಅಬ್ದುಲ್ಲಾ ಚೂರಿ, ಮುಜೀಬ್ ಪಿ.ಬಿ, ಪುತ್ತೂರು ಕಂಬಳ ಸಮಿತಿ ಅಧ್ಯಕ್ಷ ಪ್ರಸನ್ನ ಕುಮಾರ್ ರೈ, ಮಂಗಳೂರು ಉದ್ಯಮಿ ಸನ್ಮತ್ ಮೇಲಾಂಟ, ಉದ್ಯಮಿ ಪ್ರವೀಣ್ ಆಳ್ವ, ಸುಳ್ಯ ನಗರ ಪಂಚಾಯತ್ ಸದಸ್ಯ ಶರೀಫ್ ಕಂಠಿ, ಉದ್ಯಮಿ ಸಂತೋಪ್ ಕಾಮತ್ ಮಂಗಳೂರು, ಪುತ್ತೂರು ರಾಮಕೃಷ್ಣ ವಿದ್ಯಾಸಂಸ್ಥೆ ಸಂಚಾಲಕ ಹೇಮನಾಥ್ ಶೆಟ್ಟಿ, ರಿಟ್ಟಸ್ ಸಿಟಿಯಮ್, ಅಶ್ರಫ್ ಬುಳರಿಕಟ್ಟೆ, ಸಾಮಾಜಿಕ ಧುರೀಣ ರಫೀಕ್ ದರ್ಬೆ, ಅನ್ಸಾರುದ್ದೀನ್ ಜಮಾಯತ್ ಕಮಿಟಿ ಅಧ್ಯಕ್ಷ ಎಲ್ಟಿ ರಜಾಕ್ ಹಾಜಿ, ಒಶಿಯನ್ ಕನ್ಸಸ್ಟ್ರಕ್ಷನ್ ಅಡಳಿತ ನಿರ್ದೇಶಕ ಇನಾಯತ್ ಆಲಿ ಮುಲ್ಕಿ, ಉದ್ಯಮಿ ದೀಪೆಶ್ ಶೆಟ್ಟಿ, ಕೆಪೆಕ್ ಮಾಜಿ ನಿರ್ದೇಶಕ ಪಿಎ ಮಹಮ್ಮದ್, ಉದ್ಯಮಿ ಅಬ್ದುಲ್ ರಹಿಮಾನ್ ಸಂಕೇಶ್, ಹೇಮಂತ್ ಕಾಮತ್, ಪುತ್ತೂರು ಸುದ್ದಿ ಸಮೂಹ ಸಂಸ್ಥೆಯ ಸಿಇಓ ಸೃಜ್ಜನ್ ಊರುಬೈಲ್ ಮೊದಲಾದವರು ಉಪಸ್ಥಿತರಿದ್ದರು.
ಉದ್ಯಮಿ ಅನ್ವರ್ ಪೆರಾಜೆ, ಸರ್ಪುದ್ದೀನ್ ಪಾಸ್ಟ್ ಟ್ರ್ಯಾಕ್, ಶೈಮು ಪಾಸ್ಟ್ ಟ್ರ್ಯಾಕ್ ಮೊದಲಾದವರು ಸಹಕರಿಸಿದರು. ಪ್ರಥಮ ಗ್ರಾಹಕರಾಗಿ ಸುಳ್ಯದ ಹಿರಿಯ ಕೃಷಿಕ ಉದ್ಯಮಿ ಇಬ್ರಾಹಿಂ ಸಂಕೇಶ್ ಟಯರ್ ಖರೀದಿಸಿದರು. ಪತ್ರಕರ್ತ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಮಳಿಗೆಯಲ್ಲಿ ಯಕೋಹಮ, ಅಪೋಲೋ, ಮಿಚ್ಲಿ, ಬ್ರಿಡ್ಜ್ ಸ್ಟೋನ್, ಕೊಂಟಿನೇಂಟಲ್, ಪಿರೇಲಿ, ಆಫ್ರೋಡ್ ಟಯರ್ಗಳಾದ ಮಾಕ್ಸೀಸ್, ಬೀಯೇಫ್ ಗುಡ್ರಿಚ್ಚ್, ಹ್ಯಾನ್ ಕುಕ್ಕ್, ಸೇರಿದಂತೆ ಎಲ್ಲಾ ಕಂಪನಿಯ ಟಯರ್ಸ್ಗಳು, ಮ್ಯಾಗ್ ವೀಲ್, ವಾಹನಗಳಿಗೆ ಬೇಕಾಗುವ ಅತ್ಯಾಧುನಿಕ ಶೈಲೀಯ ಅಲಂಕಾರಿಕ ಸಾಮಾಗ್ರಿಗಳು, ವೀಲ್ ಎಲೈಮೆಂಟ್, ಬ್ಯಾಲೆನ್ಸಿಂಗ್, ಕಾರ್ವಾಶ್, ನೈಟ್ರೋಜನ್, ಎಸ್ಸಸರೀಸ್, ಪೋಮ್ ವಾಶ್ ಇತ್ಯಾದಿ ಸೌಲಭ್ಯಗಳು ಮಳಿಗೆಯಲ್ಲಿ ದೊರೆಯುತ್ತದೆ ಎಂದು ಸಂಸ್ಥೆಯ ಪಾಲುದಾರರು ತಿಳಿಸಿದರು.
ಹದಿಮೂರು ವರ್ಷಗಳ ಹಿಂದೆ ಟಯರ್ ಮಾರಾಟ ಮತ್ತು ವಾಹನಗಳ ಮ್ಯಾಗ್ವೀಲ್, ವೀಲ್ ಎಲೈಮೆಂಟ್ ಇನ್ನಿತರ ಎಸ್ಸಸರಿಸ್ ಮಾರಟ ಮತ್ತು ಸೇವೆಯ ಮಳಿಗೆಯನ್ನು ಪ್ರಾರಂಭಿಸಿ ಕರ್ನಾಟಕ ಮತ್ತು ಕೇರಳ ಸೇರಿದಂತೆ ಐದನೇ ಸಂಸ್ಥೆಯನ್ನು ಪುತ್ತೂರಿನಲ್ಲಿ ಪ್ರಾರಂಭಿಸಿದಗದೇವೆ ಬಹುತೇಕ ಗ್ರಾಹಕರಿಗೆ ಪಾಸ್ಟ್ ಟ್ರ್ಯಾಕ್ ಸೇವೆಯಿಂದ ತೃಪ್ತಿ ನೀಡಿದೆ ಎಂಬ ವಿಶ್ವಾಸ ನಮಿಗೆ ಇದೆ ಪುತ್ತೂರು ಪರಿಸರದ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡುವ ಉದ್ದೇಶ ನಮ್ಮದಾಗಿದೆ ಎಲ್ಲರ ಸಹಕಾರವನ್ನು ಬಯಸುತ್ತೇವೆ–ಶಾಫಿ ಪಾಸ್ಟ್ ಟ್ರ್ಯಾಕ್