ಮೇಘಾಲಯ ಸಹಕಾರಿ ಸಂಘದ ಅಧ್ಯಯನ ತಂಡ ಆಲಂಕಾರು ಸಿ.ಎ ಬ್ಯಾಂಕ್ ಗೆ ಭೇಟಿ

0

ಆಲಂಕಾರು: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಮೇಘಾಲಯದ ಸಹಕಾರಿ ಸಂಘದ ತಂಡ ನಬಾಡ್೯ ಬ್ಯಾಂಕ್ ನ ಮೂಲಕ ಭೇಟಿ ನೀಡಿ ಇಲ್ಲಿ ನಡೆಯುತ್ತಿರುವ ಕಾರ್ಯ ವೃಖರಿಯ ಬಗ್ಗೆ ಅಧ್ಯಯನ ನಡೆಸಿದರು.

ಆನಂತರ ಸಂಘದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘದ ಅಧ್ಯಕ್ಷರಾದ ಧರ್ಮಪಾಲ ರಾವ್ ಕಜೆ ಮೇಘಾಲಯದ ಸಹಕಾರಿ ಸಂಘದ ತಂಡದವರನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ .ಕೆ ಹಾಗು ಲೆಕ್ಕಿಗರಾದ ಮನೋಹರ ಪ್ರಕಾಶ್ ಹಾಗು ಸಿಬ್ಬಂದಿಗಳು ಸಂಘದಲ್ಲಿ ನಡೆಯುತ್ತಿರುವ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಂಘದ ನಿರ್ದೇಶಕರುಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here