ಪುತ್ತೂರು : ಕಾವು ಬುಶ್ರಾ ಸ್ಕೂಲ್ ಬಳಿ ಓಮ್ನಿ ಕಾರು ಹಾಗೂ ಸೆಲಾರಿಯೊ ಕಾರು ನಡುವೆ ಅಪಘಾತ ನಡೆದ ಘಟನೆ ಆ.13 ರಂದು ನಡೆದಿದೆ. ಪೈಚಾರಿನಿಂದ ಮಾಡಾವಿಗೆ ಚಲಿಸುತ್ತಿದ್ದ ಕಾರು ಹಾಗೂ ಪುತ್ತೂರು ಭಾಗದಿಂದ ಸುಳ್ಯ ಕಡೆ ಚಲಿಸುತ್ತಿದ್ದ ಸೆಲಾರಿಯೊ ಕಾರು ನಡುವೆ ಅಪಘಾತ ನಡೆದು ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ. ಸೆಲಾರಿಯೊ ಕಾರ್ನಲ್ಲಿ ಸುಳ್ಯದ ಸರ್ಕಲ್ ಇನ್ಸ್ಪೆಕ್ಟರ್ ನವೀನ್ಚಂದ್ರ ಜೋಗಿ ಹಾಗೂ ಓಮ್ನಿಯಲ್ಲಿ ಈ ಹಿಂದೆ ಬೆಳ್ಳಾರೆಯಲ್ಲಿ ಅಡಿಕೆ ವ್ಯಾಪಾರ ನಡೆಸುತ್ತಿದ್ದ ಹಾಗೂ ಪ್ರಸ್ತುತ ಮಾಡಾವಿನಲ್ಲಿ ರಬ್ಬರ್ ವ್ಯಾಪಾರ ನಡೆಸುತ್ತಿದ್ದ ಹನೀಫ್ ಎಂಬವರು ಪ್ರಯಾಣಿಸುತ್ತಿದ್ದರು. ಸಂಪ್ಯ ಪೋಲಿಸರು ಹಾಗೂ ಸ್ಥಳೀಯ ಠಾಣೆಗಳ ಅಧಿಕಾರಿಗಳೂ ಸ್ಥಳಕ್ಕಾಗಮಿಸಿದ್ದಾರೆ. ಸ್ಥಳೀಯರ ಸಹಕಾರದಿಂದ ರಸ್ತೆಯಲ್ಲಿದ್ದ ಕಾರನ್ನು ಬದಿಗೆ ಸರಿಸಲಾಗಿದೆ.