ಪುತ್ತೂರು: ಕಲ್ಲಮ ಶ್ರೀ ಗುರುರಾಘವೇಂದ್ರ ಮಠದಲ್ಲಿ ಆ.12, 13 ಮತ್ತು 14ರಂದು ಶ್ರೀ ಗುರುಗಳ 351ನೇ ಆರಾಧನೋತ್ಸವ ಸಂಭ್ರಮದಿಂದ ನಡೆಯಿತು. ಮೂರು ದಿನಗಳಲ್ಲೂ ಪ್ರಾತಃಕಾಲದ ಪೂಜೆ, ಆಲಂಕಾರ ಪೂಜೆ ವಿಧಿ ವಿಧಾನಗಳು ನೆರವೇರಿತು. ಅರ್ಚಕ ಗೋಕುಲ ಅಡಿಗ, ಕೃಷ್ಣ ಅಡಿಗ, ಅಭಿಷೇಕ್, ಶಿವ, ಸೂರ್ಯನಾರಾಯಣ ಪುತ್ತೂರಾಯ, ನಿರಂಜನ ಭಟ್, ಸುಧೀಂದ್ರ, ಅಚ್ಯುತ, ನಾಗೇಶ ಮುಂತಾದವರು ದೇವ ಕಾರ್ಯಗಳನ್ನು ನಡೆಸಿಕೊಟ್ಟರು. ವಿವಿಧ ಭಜನಾ ಸಂಘಗಳು ಭಜನಾ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಮೂರು ದಿನಗಳಲ್ಲಿ ಮಧ್ಯಾಹ್ನ ಮತ್ತು ರಾತ್ರಿ ಅನ್ನ ಸಂತರ್ಪಣೆ ನಡೆಯಿತು.