ಕುಂತೂರು: ಅರ್ಬಿ ದೇವಸ್ಥಾನದಲ್ಲಿ ಗಣಕಯಂತ್ರ ಅಳವಡಿಕೆ

0

ಪೆರಾಬೆ: ಕುಂತೂರು ಗ್ರಾಮದ ಅರ್ಬಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಗಣಕಯಂತ್ರವನ್ನು ಅಳವಡಿಸಲಾಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀಕೃಷ್ಣ ಪ್ರಸಾದ್ ಉಪಾಧ್ಯಯರವರು ಪ್ರಾರ್ಥಿಸುವ ಮೂಲಕ ಕೊಡುಗೆ ನೀಡಿದ ಗಣಕಯಂತ್ರವನ್ನು ದೇವಸ್ಥಾನಕ್ಕೆ ಸಮರ್ಪಣೆ ಮಾಡಲಾಯಿತು.ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷ ಮೋಹನ್‌ದಾಸ್ ರೈಯವರು ಕಂಪ್ಯೂಟರ್ ಬಟನ್ ಒತ್ತುವ ಮೂಲಕ ಗಣಕಯಂತ್ರಕ್ಕೆ ಚಾಲನೆ ನೀಡಿದರು. ಗಣಕಯಂತ್ರ ಕೊಡುಗೆ ನೀಡಿದ ಪಾಲಾರ್ ಕನ್‌ಸ್ಟ್ರಕ್ಷನ್ ಮಾಲಕ ಪಾಲಾರು ವಿಜಯ ಸುಬ್ರಹ್ಮಣ್ಯ, ದೇವಸ್ಥಾನ ಆಡಳಿತ ಸಮಿತಿ ಅಧ್ಯಕ್ಷ ಕೃಷ್ಣಕುಮಾರ್ ಅತ್ರಿಜಾಲು, ಕಾರ್ಯದರ್ಶಿ ಪ್ರವೀಣ್ ಆಳ್ವ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here