ಶ್ರೀ ಕ್ಷೇತ್ರ ಕೆಯ್ಯೂರು ‌ದೇವಳದ ‌ ‌ಗಣೇಶೋತ್ಸವ , ವೈಭವದಿ ನಡೆದ ಶೋಭಾಯಾತ್ರೆ ‌ಸಂಪನ್ನ 

0

ಕೆಯ್ಯೂರು:  ಶ್ರೀ  ಮಹಿಷಮರ್ದಿನಿ ದುರ್ಗಾಪರಮೇಶ್ವರೀ ದೇವಸ್ಥಾನ ಕೆಯ್ಯೂರಿನಲ್ಲಿ ಶ್ರೀ ಕ್ಷೇತ್ರ ದೇವಳದ ವ್ಯವಸ್ಥಾಪನ ಸಮಿತಿ ಕೆಯ್ಯೂರು  ಇದರ ಆಶ್ರಯದಲ್ಲಿ ಆ.31ರಿಂದ  ಸೆ2ರ ವರೆಗೆ ಕೆಯ್ಯೂರು ದೇವಳದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವು, ವಿವಿಧ ದಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು. 
ಪ್ರಧಾನ ಅರ್ಚಕರಾದ ಶ್ರೀನಿವಾಸ ರಾವ್ ಮತ್ತು ಆನಂದ ಭಟ್, ಸರಳ ಕಾರ್ಯಕ್ರಮಗಳ ಮೂಲಕ ವಿಘ್ನ ವಿನಾಶಕನ ಆರಾಧನೆಯೊಂದಿಗೆ ನಡೆಯಿತು.ಕೆಯ್ಯೂರು ಶ್ರೀ ದುರ್ಗಾ ಭಜನಾ ಮಂಡಳಿಯ ವತಿಯಿಂದ ವಿವಿಧ ಭಜನಾ ತಂಡಗಳಿಂದ ಮೂರು ದಿವಸಗಳ ಕಾಲ ದೇವಳದಲ್ಲಿ ಭಜನಾ ಕಾರ್ಯಕ್ರಮ ಜರಗಿತು.ಸೆ2ರಂದು ಬೆಳಿಗ್ಗೆ ಗಣಪತಿ ಹವನ, ಮಧ್ಯಾಹ್ನ ಮಹಾಪೂಜೆ,ಅನ್ನಸಂತರ್ಪಣೆ ನಡೆದು,ಸಂಜೆ ವಿಜೃಂಭಣೆಯ ಶ್ರೀ ಗಣೇಶ ವಿಗ್ರಹದ ಶೋಭಾಯಾತ್ರೆಯು, ಶ್ರೀ ದುರ್ಗಾ ಭಜನಾ ಮಂಡಳಿ ಕೆಯ್ಯೂರು ಇವರಿಂದ ಭಜನಾ ಕಾರ್ಯಕ್ರಮ, ಶ್ರೀ ದುರ್ಗಾ ವಾಹಿನಿ ಭಜನಾ ಮಂಡಳಿ ‌ಕಾವು ಮಾಣಿಯಡ್ಕ ಪುಟಾಣಿ ಮಕ್ಕಳಿಂದ ಭಜನಾ ಕುಣಿತ, ಶ್ರೀ ರಾಮ ಚೆಂಡೆ ಲಕ್ಷ್ಮೀದೇವಿ ಬೆಟ್ಟ ಪುತ್ತೂರು ಚೆಂಡೆ ಕುಣಿತ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ದೆರ್ಲ ಒಕ್ಕೂಟ  ನಾಸಿಕ್ ಬ್ಯಾಂಡ್, ಕಾರ್ಯಕ್ರಮ ನಡೆಯಿತು. ಶೋಬಾಯಾತ್ರೆಯಲ್ಲಿ ಕೇಸರಿ ಪ್ರೇಂಡ್ಸ್ ಸಂತೋಷ್ ನಗರ ಪದಾದಿಕಾರಿಗಳಿಂದ ಸುಡುಮದ್ದು, ಲಘ ಉಪಹಾರ ನಡೆಯಿತು. ಕೆಯ್ಯೂರು, ಸಂತೋಷ್ ನಗರ ,ಮಾಡಾವು ಕಟ್ಟೆ , ಬೊಳಿಕ್ಕಳದಲ್ಲಿ  ಪೂಜೆ, ನಡೆದು  ಗೌರಿ ಹೊಳೆ ಸಂಗಮದಲ್ಲಿ ವಿಸರ್ಜನೆ ಮಾಡಲಾಯಿತು. ನಂತರ ಅನ್ನ ಸಂತರ್ಪಣೆ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here