ಬಿ.ಎಂ.ಎಸ್ ಆಟೋ ರಿಕ್ಷಾ ಚಾಲಕರ-ಮಾಲಕರ ಸಂಘದ ದಾರಂದಕುಕ್ಕು ಘಟಕದ ರಚನೆ;ಅಧ್ಯಕ್ಷರಾಗಿ ಬಾಬು ಗೌಡ, ಪ್ರ.ಕಾರ್ಯದರ್ಶಿ ಗುಣಕರ ಪೂಜಾರಿ

0

ಪುತ್ತೂರು: ಬಿಎಂಎಸ್ ಆಟೋ ರಿಕ್ಷಾ ಚಾಲಕರ ಮಾಲಕರ ಸಂಘದ ದಾರಂದಕುಕ್ಕು ಹೊಸ ರಚನೆ ಮಾಡಲಾಯಿತು. ಘಟಕದ ಅಧ್ಯಕ್ಷರನ್ನಾಗಿ ಬಾಬುಗೌಡ, ಉಪಾಧ್ಯಕ್ಷರಾಗಿ ಆನಂದ ,ಪ್ರಧಾನ ಕಾರ್ಯದರ್ಶಿಯಾಗಿ ಗುಣಕಾರ ಪೂಜಾರಿ, ಕೋಶಾಧಿಕಾರಿಯಾಗಿ ಮಂಜುನಾಥ ಗೌಡ ಅವರನ್ನು ಆಯ್ಕೆ ಮಾಡಲಾಯಿತು.


ಬಿಎಂಎಸ್ ತಾಲೂಕು ಸಂಘದ ಅಧ್ಯಕ್ಷ ರಾಜೇಶ್ ಮರೀಲ್ ಮತ್ತು ಪ್ರಧಾನ ಕಾರ್ಯದರ್ಶಿ ದಿನೇಶ್ ಗೌಡ ಅವರ ಉಪಸ್ಥಿತಿಯಲ್ಲಿ ಇತ್ತೀಚೆಗೆ ಕೊಡಿಮರ ಸಭೆಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಘಟಕದ ಜೊತೆ ಕಾರ್ಯದರ್ಶಿಯಾಗಿ ಅಶೋಕ, ಸಂಘಟನಾ ಕಾರ್ಯದರ್ಶಿಯಾಗಿ ಯೋಗೀಶ ಪದಾಧಿಕಾರಿಗಳನ್ನಾಗಿ ಹಾಗೂ ಇತರರನ್ನು ಸದಸ್ಯರನ್ನು ಆಯ್ಕೆ ಮಾಡಲಾಯಿತು. ನೂತನ ಸಬೆಯಲ್ಲಿ ನಿಯಮಗಳು ಹಾಗೂ ಇತರ ವಿಷಯಗಳ ಬಗ್ಗೆ ನಿರ್ಣಯಿಸಲಾಯಿತು.

LEAVE A REPLY

Please enter your comment!
Please enter your name here