ಪುತ್ತೂರಿನಿಂದ ವರ್ಗಾವಣೆಗೊಂಡ ತಹಸೀಲ್ದಾರ್ ರಮೇಶ್ ಬಾಬು ಕಡಬಕ್ಕೆ !

0

ಪುತ್ತೂರು: ಪುತ್ತೂರಿನಿಂದ ವರ್ಗಾವಣೆಗೊಂಡಿದ್ದ ತಹಸೀಲ್ದಾರ್ ರಮೇಶ್ ಬಾಬು ಅವರನ್ನು ಕಡಬ ತಾಲೂಕಿಗೆ ವರ್ಗಾವಣೆಗೊಳಿಸಲಾಗುತ್ತಿದೆ ಎಂದು ತಿಳಿದು ಬಂದಿದೆ.
2020ರಲ್ಲಿ ಮೈಸೂರಿನಿಂದ ಪುತ್ತೂರು ತಹಸೀಲ್ದಾರ್ ಆಗಿ ವರ್ಗಾವಣೆಗೊಂಡ ರಮೇಶ್ ಬಾಬು ಅವರು 2022ರ ಜೂನ್ ತಿಂಗಳಲ್ಲಿ ವರ್ಗಾವಣೆಗೊಂಡಿದ್ದರು. ಆದರೆ ಅವರಿಗೆ ಸ್ಥಳ ನಿಗದಿ ಪಡಿಸಿರಲಿಲ್ಲ. ಇದೀಗ ಅವರನ್ನು ಕಡಬ ತಹಸೀಲ್ದಾರ್ ಅಗಿ ವರ್ಗಾವಣೆಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಈ ಕುರಿತು ಸರಕಾರದ ಆದೇಶ ಪತ್ರ ಇನ್ನಷ್ಟೆ ಬರಬೇಕಾಗಿದೆ.

LEAVE A REPLY

Please enter your comment!
Please enter your name here