ಕೊಣಾಲು : ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನಿಂದ ಸಹಾಯಧನ

0

ನೆಲ್ಯಾಡಿ: ಕೊಣಾಲು ಒಕ್ಕಲಿಗ ಸ್ವಸಹಾಯ ಒಕ್ಕೂಟದ ಶ್ರೀಕೋಲ್ಪೆ ಸಂಘದ ಸದಸ್ಯ ಬಾಬು ಗೌಡರವರು ಇತ್ತೀಚೆಗೆ ಹೃದಯಾಘಾತದಿಂದ ನಿಧನ ಹೊಂದಿದ್ದು ಆರ್ಥಿಕ ಸಂಕಷ್ಟದಲ್ಲಿರುವ ಅವರ ಕುಟುಂಬಕ್ಕೆ ಪುತ್ತೂರು ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನಿಂದ ನೀಡಿದ ಸಹಾಯಧನದ ಚೆಕ್‌ನ್ನು ಕೊಣಾಲು ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಶೇಖರ ಗೌಡ ಕೋಲ್ಪೆ ಮತ್ತು ಕೊಣಾಲು ಪಂಚಾಯತ್ ಸದಸ್ಯೆ ಶೃತಿ ಅಶೋಕ ಗೌಡರವರು ಮೃತರ ಪತ್ನಿ ಲಲಿತಾರವರಿಗೆ ಹಸ್ತಾಂತರಿಸಿದರು. ಕೊಣಾಲು ಒಕ್ಕಲಿಗ ಯುವ ಘಟಕದ ಅಧ್ಯಕ್ಷ ಗಂಗಾಧರ ಗೌಡ ಕೋಲ್ಪೆ ಮತ್ತು ನೆಲ್ಯಾಡಿ ವಲಯದ ಪ್ರೇರಕ ಪರಮೇಶ್ವರ ಗೌಡ ಕೊಂಬಾರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here