ಶ್ರೀಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿಯ ವಾರ್ಷಿಕ ಮಹಾಸಭೆ

0

  • 4.47 ಕೋಟಿ ರೂ. ನಿವ್ವಳ ಲಾಭ, ಶೇ.10 ಡಿವಿಡೆಂಡ್

ಪುತ್ತೂರು : ಪುತ್ತೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿ ರಾಜ್ಯದಾದ್ಯಂತ 17 ಶಾಖೆಗಳೊಂದಿಗೆ ಕಾರ್ಯಾಚರಿಸುತ್ತಿರುವ ಶ್ರೀ ಸರಸ್ವತಿ ಕ್ರೆಡಿಟ್‌ ಸೌಹಾರ್ದ ಸಹಕಾರಿಯ 21ನೇ ವಾರ್ಷಿಕ ಮಹಾಸಭೆಯು ಸಹಕಾರಿಯ ಅಧ್ಯಕ್ಷರಾದ ಶ್ರೀ ಎಸ್‌ ಆರ್‌ ಸತೀಶ್ಚಂದ್ರರವರ ಅಧ್ಯಕ್ಷತೆಯಲ್ಲಿ ದಿನಾಂಕ 04-09-2022ನೇ ಆದಿತ್ಯವಾರದಂದು ಒಕ್ಕಲಿಗ ಗೌಡ ಸಮುದಾಯ ಭವನ ತೆಂಕಿಲ ಪುತ್ತೂರು ಇಲ್ಲಿ ನಡೆಯಿತು. ಸಹಕಾರಿಯ ಅಧ್ಯಕ್ಷರು ಮಾತನಾಡುತ್ತಾ ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಸಹಕಾರಿಯೂ ಗಣನೀಯ ಪ್ರಗತಿ ಸಾಧಿಸಲು ಕಾರಣೀಕರ್ತರಾದ ಎಲ್ಲಾ ಸದಸ್ಯಬಾಂಧವರಿಗೆ ಅಭಿನಂದನೆ ಸಲ್ಲಿಸಿದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 5 ಶಾಖೆಗಳನ್ನು ತೆರೆಯುವುದು ಹಾಗೂ ಸಹಕಾರಿಯ ಸ್ವಂತ ಕಟ್ಟಡದ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ತಿಳಿಸಿದರು 2021 -22ರ ಆರ್ಥಿಕ ವರ್ಷಾಂತ್ಯಕ್ಕೆ ರೂ 4.47 ಕೋಟಿ ನಿವ್ವಳ ಲಾಭ ದಾಖಲಿಸಿದ್ದು ಶೇ 10 ಡಿವಿಡೆಂಡ್ ನ್ನು ಘೋಷಿಸಿದರು. ಸಹಕಾರಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಶ್ರೀ ವಸಂತ ನಾಯಕ್‌ ಎ ರವರು ವಾರ್ಷಿಕ ವರದಿ ಹಾಗೂ ಲೆಕ್ಕ ಪತ್ರಗಳನ್ನು ಮಂಡಿಸಿದರು. ಕ್ಲಪ್ತ ಸಮಯದಲ್ಲಿ ಲೆಕ್ಕ ಪರಿಶೋಧನೆಯನ್ನು ಮಾಡಿ ಕೊಟ್ಟ ಲೆಕ್ಕ ಪರಿಶೋಧಕರಾದ ಶ್ರೀ ಪ್ರೇಮನಾಥ ಹೆಗ್ಡೆ ಹಾಗೂ 75 “ದೇಶಭಕ್ತಿಗೀತೆಗಳ ಮೂಲಕ ಸತತ ಗಾಯನದ ಅಖಂಡ ರಾಷ್ಟ್ರಗಾನ ಪುಷ್ಪಮಾಲೆ” ದ ಮೂಲಕ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ನಲ್ಲಿ ವಿಶೇಷ ದಾಖಲೆ ಮಾಡಿದ ಶ್ರೀ ಹರೀಶ್‌ ನಾಯಕ್‌ ಅಜೇರು ಇವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಸಹಕಾರಿಯ ಉಪಾಧ್ಯಕ್ಷಉಮೇಶ್‌ ಪ್ರಭು, ನಿರ್ದೇಶಕರಾದ ದೇವಿಪ್ರಸಾದ್‌ ಕೆ,  ಕೆ ಹರೀಶ್‌ ಬೋರ್ಕರ್‌, ಕೆ.ಬಾಲಕೃಷ್ಣ ಬೋರ್ಕರ್‌,  ಹೇಮಂತ ಕುಮಾರ್‌ ಕೆ ಆರ್‌  ಪ್ರಕಾಶ್ಚಂದ್ರ ಪಿ,  ರಮೇಶ್ಚಂದ್ರ ಎಂ, ರಾಜಗೋಪಾಲ ಬಿ,  ದೇವಕಿ ಕೆ,  ಸರಸ್ವತಿ ಎನ್‌ , ವೃತ್ತಿಪರ ನಿರ್ದೇಶಕರಾದ ಬಿ ವಸಂತ ಶಂಕರ್‌, ವೇದವ್ಯಾಸ ಕೆ, ಕಾರ್ಯಾನುಗುಣ ನಿರ್ದೇಶಕರಾದ  ಶ್ರೀಕಾಂತ ರಾವ್‌ ವಿ ಡಿ , ರವೀಶ ಪಿರವರು ಉಪಸ್ಥಿತರಿದ್ದರು.

ಸಹಕಾರಿಯ ಹಿರಿಯ ಅಧಿಕಾರಿ  ಶ್ರೀರಂಜಿತಾ ಎ ವಿ ಪ್ರಾರ್ಥಿಸಿದರು, ಹಿರಿಯ ವ್ಯವಸ್ಥಾಪಕರಾದ  ಪ್ರೇಮಚಂದ್ರ ನಾಯಕ್‌ ಎಂ ಸ್ವಾಗತಿಸಿ ,ವ್ಯವಸ್ಥಾಪಕರಾದ  ಸುಪ್ರಿತ್‌ ಕುಮಾರ್‌ ಎಂ ವಂದಿಸಿದರು. ರಾಷ್ಟ್ರಗೀತೆಯೊಂದಿಗೆ ಸಭೆಯು ಮುಕ್ತಾಯಗೊಂಡಿತು.

ಸಾಂಸ್ಕೃತಿಕ ಕಾರ್ಯಕ್ರಮ :
ಮಹಾಸಭೆಯ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಪೂರ್ವಾಹ್ನ 9.00ರಿಂದ ಶ್ರೀ ಸರಸ್ವತಿ ಕಲಾ ತಂಡ ಪುತ್ತೂರು ವತಿಯಿಂದ ಸಂಗೀತ ರಸಮಂಜರಿ ಹಾಗೂ ಅಪರಾಹ್ನ ಶ್ರೀ ಸರಸ್ವತಿ ಮಹಿಳಾ ಮಂಡಳಿ ಪುತ್ತೂರು ಇವರಿಂದ “ಸಂಜಯ ರಾಯಭಾರ” ಯಕ್ಷಗಾನ ತಾಳಮದ್ದಳೆ ನಡೆಯಿತು. ಕಾರ್ಯಕ್ರಮವನ್ನು ವ್ಯವಸ್ಥಾಪಕ ದೇವಿಪ್ರಸಾದ್‌ ಎ ನಿರೂಪಿಸಿದರು.

LEAVE A REPLY

Please enter your comment!
Please enter your name here