ವಿದ್ಯಾಭಾರತಿ ಯೋಗಾಸನ ಸ್ಪರ್ಧೆ: ವಿವೇಕಾನಂದ ಆ.ಮಾ.ಶಾಲಾ ಬಾಲವರ್ಗದ ಬಾಲಕರ ತಂಡಕ್ಕೆ ದ್ವಿತೀಯ ಸಮಗ್ರ ಪ್ರಶಸ್ತಿ

0

ಪುತ್ತೂರು : ಪಟ್ಟೂರು ಶ್ರೀರಾಮ ವಿದ್ಯಾಲಯದಲ್ಲಿ ನಡೆದ ವಿದ್ಯಾಭಾರತಿ ದ.ಕ ಜಿಲ್ಲೆಯ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲಾ ಬಾಲವರ್ಗದ ಬಾಲಕರ ತಂಡ ದ್ವಿತೀಯ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ. ವೈಯಕ್ತಿಕ ವಿಭಾಗದಲ್ಲಿ ಆತ್ಮಿಕಾ ರೈ 5ನೇ ಸ್ಥಾನ ಮತ್ತು ರಿದಮಿಕ್ ವಿಭಾಗದಲ್ಲಿ ತನ್ಮಯಿ ವಾಗ್ಲೆ(9ನೇ ತರಗತಿ) ತೃತೀಯ ಸ್ಥಾನ ಪಡೆದಿರುತ್ತಾರೆ.

ಕಿಶೋರ ವರ್ಗದ ಬಾಲಕಿಯರ ವಿಭಾಗದಲ್ಲಿ ಆತ್ಮಿಕಾ ರೈ, 9ನೇ ತರಗತಿ (ವಿನೋದ್ ರೈ ಮತ್ತು ಲಕ್ಷ್ಮೀ ದಂಪತಿ ಪುತ್ರಿ) ಪ್ರಕೃತಿ, 9ನೇ ತರಗತಿ(ಪ್ರಮೋದ್ ರೈ ಮತ್ತು ಪ್ರಭಾವತಿ ದಂಪತಿ ಪುತ್ರಿ), ಧೃತಿ ಪಿ.ಡಿ, 9ನೇ ತರಗತಿ(ದೊಯೈರಾಜ್ ಪಿ.ಎಸ್ ಮತ್ತು ದಿವ್ಯಾ ದಂಪತಿ ಪುತ್ರಿ), ಅನೀಷ್ಕಾ, 9ನೇ ತರಗತಿ(ಗೋವಿಂದ ಪಿ. ಮತ್ತು ಮಮತಾ ದಂಪತಿ ಪುತ್ರಿ) ಮತ್ತು ಅನುಶಿಕಾ, 9ನೇ ತರಗತಿ(ಚಂದ್ರಶೇಖರ ಮತ್ತು ಗಾಯತ್ರಿ ದಂಪತಿ ಪುತ್ರಿ), ಗುಂಪು ಸ್ಪರ್ಧೆಯಲ್ಲಿ ಹಾಗೂ ರಿದಮಿಕ್ ಸ್ಪರ್ಧೆಯಲ್ಲಿ ತನ್ಮಯಿ ವಾಗ್ಲೆ, 9ನೇ ತರಗತಿ(ಸತೀಶ್ ವಾಗ್ಲೆ ಮತ್ತು ಪೂರ್ಣಿಮ ಎಸ್ ದಂಪತಿ ಪುತ್ರಿ) ಭಾಗವಹಿಸಿರುತ್ತಾರೆ.

ಬಾಲವರ್ಗ ಬಾಲಕರ ವಿಭಾಗದಲ್ಲಿ ಅಭಿಷೇಕ್, 7ನೇ ತರಗತಿ(ರಾಧಾಕೃಷ್ಣ ಮತ್ತು ಗೀತಾ ದಂಪತಿ ಪುತ್ರ), ಮನ್ವಿತ್ 7ನೇ ತರಗತಿ(ಹೇಮಂತ್ ಕುಮಾರ್ ಮತ್ತು ಸೌಮ್ಯ ದಂಪತಿ ಪುತ್ರ), ಪೃಥ್ವಿರಾಜ್ 7ನೇ ತರಗತಿ(ಗಣೇಶ್ ಭಂಡಾರಿ ಮತ್ತು ಲತಾ ದಂಪತಿ ಪುತ್ರ), ಸೃಜನ್ 7ನೇ ತರಗತಿ(ರಾಮಕೃಷ್ಣ ಮತ್ತು ರವಿಕಲಾ ದಂಪತಿ ಪುತ್ರ) ಹಾಗೂ ಸ್ಮರಣ್ 6ನೇ ತರಗತಿ(ರಾಮಕೃಷ್ಣ ಮತ್ತು ರವಿಕಲಾ ದಂಪತಿ ಪುತ್ರ), ಧೃತಿಕ್8ನೇ ತರಗತಿ(ಪ್ರದೀಪ್ ಪೂಜಾರಿ ಮತ್ತು ಸವಿತ ದಂಪತಿ ಪುತ್ರ), ಪ್ರಣೀತ್‌ಕೃಷ್ಣ, 8ನೇ ತರಗತಿ( ಮುರಳೀಧರ ಮತ್ತು ಪ್ರಿಯದರ್ಶಿನಿ ದಂಪತಿ ಪುತ್ರ) ಭಾಗವಹಿಸಿದ್ದಾರೆ. ಬಾಲವರ್ಗದ ಬಾಲಕಿಯರ ವಿಭಾಗದಲ್ಲಿ ಧನ್ಯಶ್ರೀ, 6ನೇ ತರಗತಿ(ಪ್ರಸಾದ್ ರೈ ಮತ್ತು ನಳಿನಾಕ್ಷಿ ದಂಪತಿ ಪುತ್ರಿ), ಅನ್ವಿ ಎಂ. 6ನೇ ತರಗತಿ(ವಿಜಯ ಕುಮಾರ್ ಮತ್ತು ನವ್ಯ ದಂಪತಿ ಪುತ್ರಿ), ಹಿತಾ ಬಿ., 6ನೇ ತರಗತಿ(ಹರಿಪ್ರಸಾದ್ ಬಿ. ಮತ್ತು ಅಮೃತಾಲಕ್ಷ್ಮೀ ದಂಪತಿ ಪುತ್ರಿ), ಕೃತಿ ಪಿ.ಎಸ್. 6ನೇ ತರಗತಿ(ಪಿ.ಬಿ. ಸತೀಶ್ ಮತ್ತು ರಂಜನಿ ದಂಪತಿ ಪುತ್ರಿ), ಸೃಷ್ಟಿ ವೈ., 6ನೇ ತರಗತಿ(ಯೋಗೀಶ್ ಮತ್ತು ದಿವ್ಯಾ ದಂಪತಿ ಪುತ್ರಿ) ಭಾಗವಹಿಸಿರುತ್ತಾರೆ.

LEAVE A REPLY

Please enter your comment!
Please enter your name here