ವಾರ್ಡ್‌ಗಳಲ್ಲಿ ಮನೆ ದುರಸ್ಥಿ ಪಟ್ಟಿಯನ್ನು ತಕ್ಷಣ ಕೊಡಬೇಕು; ನಗರಸಭೆ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷರ ಸೂಚನೆ

0

ಪುತ್ತೂರು: ಪ್ರತಿ ವಾರ್ಡ್‌ಗಳಲ್ಲಿ ಮನೆ ದುರಸ್ಥಿಗಳ ಪಟ್ಟಿಯನ್ನು ಆದಷ್ಟು ಬೇಗ ಕೊಡುವಂತೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರು ಸದಸ್ಯರಿಗೆ ಸೂಚನೆ ನೀಡಿದ್ದಾರೆ.

ಪುತ್ತೂರು ನಗರಸಭೆ ಸಾಮಾನ್ಯ ಸಭೆಯು ಸೆ.9ರಂದು ನಗರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಕೆ.ಜೀವಂಧರ್ ಜೈನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಪ್ರತಿ ವಾರ್ಡ್‌ಗಳಲ್ಲಿ ಮನೆ ದುರಸ್ಥಿಗೆ ಅವಕಾಶವಿದೆ. ಈ ನಿಟ್ಟಿನಲ್ಲಿ ಫಲಾನುಭವಿಗಳ ಪಟ್ಟಿಯನ್ನು ಸದಸ್ಯರು ಆದಷ್ಟು ಬೇಕ ಕೊಡಬೇಕು. ಯಾಕೆಂದರೆ ಪಟ್ಟಿ ನನಗೆ ಸಿಕ್ಕಿದ ಕೂಡಲೆ ವಿಶೇಷ ಸಭೆ ಕರೆದು ಅಪ್ರೂವಲ್ ತೆಗೆದುಕೊಂಡು ಜಿಲ್ಲಾಧಿಕಾರಿಗೆ ಕಳುಹಿಸಬೇಕು. ಅಲ್ಲಿ ಅದು ಅಪ್ರೂವಲ್ ಆಗಿ ಬರಬೇಕು. ಅದು ತಡ ಆಗದಂತೆ ಆದಷ್ಟು ಬೇಗ ಪಟ್ಟಿ ಕೊಡುವಂತೆ ನಗರಸಭೆ ಅಧ್ಯಕ್ಷ ಕೆ.ಜೀವಂಧರ್ ಜೈನ್ ಸದಸ್ಯರಲ್ಲಿ ವಿನಂತಿಸಿದರು. ನಗರಸಭೆ ಉಪಾಧ್ಯಕ್ಷೆ ವಿದ್ಯಾ ಆರ್ ಗೌರಿ, ಸ್ಥಾಯಿ ಸಮಿತಿ ಅಧ್ಯಕ್ಷ ಬಾಲಚಂದ್ರ, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸದಸ್ಯರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here