ಕಾಣಿಯೂರು: ಚಾರ್ವಾಕ ಗ್ರಾಮದ ಒಕ್ಕಲಿಗ ಸ್ವ ಸಹಾಯ ಸಂಘಗಳ ಒಕ್ಕೂಟಗಳ ರಚನೆಯು ಚಾರ್ವಾಕ ಶ್ರೀ ಕಪಿಲೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಒಕ್ಕೂಟದ ನೂತನ ಅಧ್ಯಕ್ಷರಾಗಿ ಹಿರಿಯ ಯಕ್ಷಗಾನ ಕಲಾವಿದರಾದ ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ಕಾರ್ಯದರ್ಶಿಯಾಗಿ ಕೇಶವ ಗೌಡ ಖಂಡಿಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ಎ.ಸಿ ವಿಜಯ ಅಂಬುಲ, ಜತೆ ಕಾರ್ಯದರ್ಶಿಯಾಗಿ ನಿಶ್ಚಿತ್ ಅಭಿಕಾರ, ಕೋಶಾಽಕಾರಿಯಾಗಿ ಜತ್ತಪ್ಪ ಗೌಡ ಉದ್ಲಡ್ಡ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಒಕ್ಕಲಿಗ ಸ್ವಸಹಾಯ ಟ್ರಸ್ಟಿನ ಮೇಲ್ವಿಚಾರಕ ವಿಜಯ ಕುಮಾರ್, ಪ್ರೇರಕರಾದ ಉದಯ ಕೆರೆನಾರು ಮತ್ತು ಸಂಘದ ಪ್ರಬಂಧಕರು, ಸಂಯೋಜಕರು ಉಪಸ್ಥಿತರಿದ್ದರು.