ಶ್ರೀ ಗುರುರಾಘವೇಂದ್ರ ಮಠದಲ್ಲಿ ಪಾದುಕಾನ್ಯಾಸ

0

ಉಪ್ಪಿನಂಗಡಿ: ಇಲ್ಲಿನ 34 ನೆಕ್ಕಿಲಾಡಿಯ ಶ್ರೀ ಗುರು ರಾಘವೇಂದ್ರ ಮಠದ ಜೀರ್ಣೋದ್ಧಾರ ಕಾರ್ಯ ಬಿರುಸಿನಿಂದ ಸಾಗುತ್ತಿದ್ದು, ಪಾದುಕಾನ್ಯಾಸ ಕಾರ್ಯಕ್ರಮವನ್ನು ಉಪ್ಪಿನಂಗಡಿ ಸಿಎ ಬ್ಯಾಂಕ್‌ನ ಅಧ್ಯಕ್ಷ ಕೆ.ವಿ. ಪ್ರಸಾದ್ ನೆರವೇರಿಸಿಕೊಟ್ಟರು.

ಈ ಸಂದರ್ಭದಲ್ಲಿ ಮಠದ ಅಧ್ಯಕ್ಷರಾದ ಕೆ. ಉದಯ ಕುಮಾರ್, ಗೌರವಾಧ್ಯಕ್ಷ ಕೆ. ರಾಧಕೃಷ್ಣ ನಾಯ್ಕ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕ್ಷೇತ್ರ ಪುರೋಹಿತ ಹರೀಶ ಉಪಾಧ್ಯಾಯ, ಪ್ರಮುಖರಾದ ಎನ್. ಗೋಪಾಲ ಹೆಗ್ಡೆ, ಸದಾನಂದ ನೆಕ್ಕಿಲಾಡಿ, ಗ್ರಾ.ಪಂ. ಉಪಾಧ್ಯಕ್ಷರಾದ ಸ್ವಪ್ನಾ, ಪ್ರಮುಖರಾದ ಕೆ. ಸುಧಾಕರ ಶೆಟ್ಟಿ, ಜತೀಂದ್ರ ಶೆಟ್ಟಿ ಅಲಿಮಾರ್, ವಾಮನ ಶೃಂಗಾರ್, ಮಲ್ಲೇಶ್ ಕುಂದರ್, ಕೆ ಗಣೇಶ ಭಟ್, ಪುನೀತ್ ಶಗ್ರಿತ್ತಾಯ, ಸುಜಾತ ರೈ, ಗೌತಮ್, ಶಿಲ್ಪಿ ರಾಜೇಂದ್ರ, ಜಯಪ್ರಕಾಶ ಶೆಟ್ಟಿ , ಶೈಲ, ಉಷಾಮುಳಿಯ, ವಸುಧಾ ಉಪಾಧ್ಯಾಯ, ಪ್ರವೀಣ ಆಳ್ವ, ಜಾನಕಿ ದರ್ಬೆ, ಪ್ರೇಮಾ, ಶಾಂತರಾಮ, ದಮಯಂತಿ, ಮಧುರಾ ಚಿದಾನಂದ, ಎನ್. ಕಾಮಾಕ್ಷಿ ಹೆಗ್ಡೆ, ಶೈಲಜಾ ಉಪಸ್ಥಿತರಿದ್ದರು. ಮಠದ ಅರ್ಚಕ ರಾಘವೇಂದ್ರ ಭಟ್ ಧಾರ್ಮಿಕ ವಿಧಿ ವಿಧಾನ ನಡೆಸಿದರು.

LEAVE A REPLY

Please enter your comment!
Please enter your name here