ವಿಟ್ಲ: ಆಸ್ತಿ ವಿಚಾರದಲ್ಲಿ ಸಹೋದರರಿಬ್ಬರ ಜಗಳ-ತಮ್ಮನಿಂದ ಅಣ್ಣನ ಕೊಲೆ

0

ಪುತ್ತೂರು : ತಮ್ಮನೋರ್ವ ಅಣ್ಣನನ್ನು ಕೊಲೆ ಮಾಡಿದ ಘಟನೆ ವಿಟ್ಲದ ಮಂಗಿಲಪದವು ಬನಾರಿ ಎಂಬಲ್ಲಿ ನಡೆದಿದೆ. ಬನಾರಿ ಕೊಡಂಗೆ ನಿವಾಸಿ ಸೀನಪ್ಪ ದೇವಾಡಿಗರವರ ಪುತ್ರ ಗಣೇಶ್ (52ವ.) ರವರು ಕೊಲೆಯಾದವರು. ಮೃತ ಗಣೇಶ್‌ರವರ ತಮ್ಮ ಪದ್ಮನಾಭ (48ವ.) ಕೊಲೆ ಮಾಡಿದ ಆರೋಪಿ.

ಆಸ್ತಿಯ ವಿಚಾರವಾಗಿ ಹಲವು ಸಮಯದಿಂದ ಅಣ್ಣ ತಮ್ಮನ ನಡುವೆ ಗಲಾಟೆ ನಡೆಯುತ್ತಿದ್ದು ಕಲೆವು ದಿನಗಳ ಹಿಂದೆ ವಿಟ್ಲ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು ಎಂದು ತಿಳಿದು ಬಂದಿದೆ. ಸೆ.13ರಂದು ರಾತ್ರಿಯೂ ಜಗಳ ನಡೆದಿದ್ದು ತಮ್ಮನೇ ಅಣ್ಣನನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ವಿಟ್ಲ ಪೊಲೀಸರು ಸ್ಥಳಾಕ್ಕಾಗಮಿಸಿದ್ದು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here