ತಂಡದಿಂದ ಹಲ್ಲೆ; ಆಸ್ಪತ್ರೆಗೆ ದಾಖಲು

0

ಪುತ್ತೂರು: ತಂಡವೊಂದು ಹಲ್ಲೆ ನಡೆಸಿದೆ ಎಂದು ಆರೋಪಿಸಿ ನಿಡ್ಪಳ್ಳಿ ಗ್ರಾಮದ ಪಟ್ಟೆ ನಿವಾಸಿ ವಸಂತ ಎಂಬವರು ಪುತ್ತೂರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಸೆ.12 ರಂದು ರಾತ್ರಿ ಕುಂಬ್ರ ಸಮೀಪದ ಕೊಯಿಲತ್ತಡ್ಕದಲ್ಲಿ ಅಪಘಾತವೊಂದು ನಡೆದಿತ್ತು. ಅಪಘಾತದ ಗಾಯಾಳುವನ್ನು ಸುಶ್ರೂಸಿಸುವ ವೇಳೆ ಸ್ಥಳಕ್ಕೆ ಬಂದ ತಂಡ ತನ್ನ‌ಮೇಲೆ ಹಲ್ಲೆ ನಡೆಸಿದೆ ಎಂದು ಗಾಯಾಳು ವಸಂತ ತಿಳಿಸಿದ್ದಾರೆ. ತಲೆ ಮತ್ತು ಬೆನ್ನಿನ ಭಾಗಕ್ಕೆ ಹಲ್ಲೆ ನಡೆಸಿದ್ದಲ್ಲದೆ ಬೂಟುಗಾಲಿನಿಂದ ಒದ್ದು ಜೇಬಿನಲ್ಲಿದ್ದ 2600 ನಗದನ್ನು ದೋಚಿದ್ದಾರೆ. ಘಟನೆಯ ಕುರಿತು ಸಂಪ್ಯ ಪೊಲೀಸರಿಗೆ ದೂರು ನೀಡಿದ್ದಾರೆ.

LEAVE A REPLY

Please enter your comment!
Please enter your name here