ಬೆಳ್ಳಾರೆ ಸಿಎ ಬ್ಯಾಂಕ್ ಅಧ್ಯಕ್ಷರ ಕಿಸೆಯಿಂದ 50 ಸಾವಿರ ರೂ.ನಗದು ನಾಪತ್ತೆ

0

ಪುತ್ತೂರು:ಮಾಜಿ ಸಚಿವ ಬೆಳ್ಳಿಪ್ಪಾಡಿ ರಮಾನಾಥ ರೈಯವರ ಹುಟ್ಟು ಹಬ್ಬದ ಪ್ರಯುಕ್ತ ಪೆರ್ನೆಯಲ್ಲಿ ನಡೆದ ರಕ್ತದಾನ ಶಿಬಿರ, ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಬೆಳ್ಳಾರೆ ಸಿಎ ಬ್ಯಾಂಕ್ ಅಧ್ಯಕ್ಷ ಅನಿಲ್ ರೈ ಚಾವಡಿಬಾಗಿಲು ಅವರ 50 ಸಾವಿರ ರೂ.ನಗದು ನಾಪತ್ತೆಯಾಗಿದೆ.

ತಾನು ಅಡಿಕೆ ಮಾರಾಟ ಮಾಡಿದ ಬಾಬ್ತು ಅಂಗಡಿಯವರು ನೀಡಿದ್ದ ನಗದು 50 ಸಾವಿರ ರೂ.ಗಳನ್ನು ಪ್ಯಾಂಟಿನ ಎಡಬದಿಯ ಕಿಸೆಯೊಳಗೆ ಇಟ್ಟುಕೊಂಡಿದ್ದೆ.ರಮಾನಾಥ ರೈಯವರಿಗೆ ಹಾರಾರ್ಪಣೆ ಸಂದರ್ಭ ಒಮ್ಮೆಲೇ ರಶ್ ಉಂಟಾಗಿತ್ತು. ಈ ವೇಳೆ ನನ್ನ ಕಿಸೆಯಲ್ಲಿದ್ದ 50 ಸಾವಿರ ರೂ.ಗಳ ಕಟ್ಟು ನಾಪತ್ತೆಯಾಗಿದೆ.ಇದನ್ನು ಯಾರಾದರೂ ಎಗರಿಸಿರುವ ಸಾಧ್ಯತೆ ಇದೆ. ಘಟನೆ ಬಳಿಕ ನಾವು ಸಮಾರಂಭ ನಡೆದ ಸಭಾಂಗಣದಲ್ಲಿ ಸಿಸಿ ಕ್ಯಾಮರಾ ಚೆಕ್ ಮಾಡೋಣ ಎಂದು ಹೋದೆವು.ಆದರೆ ಅಲ್ಲಿ ಸಿಸಿ ಕ್ಯಾಮರಾ ಇರಲಿಲ್ಲ ಎಂದು ಅನಿಲ್ ರೈ ಹೇಳಿದ್ದಾರೆ.

LEAVE A REPLY

Please enter your comment!
Please enter your name here