ಗ್ರಾಮಾಂತರ ಮಹಿಳಾ ಮೋರ್ಚಾದಿಂದ ನರೇಂದ್ರ ಮೋದಿ ಜನ್ಮದಿನಾಚರಣೆ

0

  • ಕುದ್ದುಪದವು ಅಂಗನವಾಡಿಯನ್ನು ದತ್ತು ಸ್ವೀಕಾರ ಮಾಡುವ ಮೂಲಕ ಆಚರಣೆ

ಪುತ್ತೂರು: ಬಿಜೆಪಿ ಗ್ರಾಮಾಂತರ ಮಹಿಳಾ ಮೋರ್ಚಾದಿಂದ ಪ್ರಧಾನಿ ನರೇಂದ್ರ ಮೋದಿ ಜನ್ಮದಿನಾಚರಣೆಯನ್ನು ಕೇಪು ಗ್ರಾಮದ ಕುದ್ದುಪದವು ಅಂಗನವಾಡಿಯನ್ನು ಆದರ್ಶ ಅಂಗನವಾಡಿಯನ್ನಾಗಿ ಮಾಡಲು ದತ್ತು ಸ್ವೀಕಾರ ಮಾಡುವ ಮೂಲಕ ಆಚರಿಸಲಾಯಿತು.

ಶಾಸಕ ಸಂಜೀವ ಮಠಂದೂರು ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಹರೀಪ್ರಸಾದ್ ಯಾದವ್, ಹಿರಿಯರಾದ ಅಪ್ಪಯ್ಯ ಮಣಿಯಾಣಿ, ಶಕ್ತಿ ಕೇಂದ್ರದ ಸಂಚಾಲಕ ರಾಧಾಕೃಷ್ಣ ಶೆಟ್ಟಿ, ಪಂಚಾಯತ್ ಸದಸ್ಯರು, ಮಹಿಳಾ ಮೋರ್ಚಾದ ಅಧ್ಯಕ್ಷೆ ಯಶಸ್ವಿನಿ ಶಾಸ್ತ್ರಿ, ಮಹಿಳಾ ಮೊರ್ಚಾ ಪ್ರಧಾನ ಕಾರ್ಯದರ್ಶಿ ಯಶೋಧ , ಕೆ. ಗೌಡ, ಉಪಾಧ್ಯಕ್ಷೆ ಪ್ರಫುಲ್ಲ ರೈ, ಕಾರ್ಯದರ್ಶಿ ಚಂದ್ರಕಲಾ ಒಳಮೊಗ್ರು, ಪಂಚಾಯತ್ ಸದಸ್ಯರಾದ ಉಮೇಶ್, ಪುಷ್ಪಾವತಿ, ಸುಂದರ ನಾಯ್ಕ, ರೈತ ಮೋರ್ಚಾ ಕೋಶಾಧಿಕಾರಿ ಶರತ್ಚಂದ್ರ ಬೈಪಡಿತ್ತಾಯ, ಧನಂಜಯ ನಾಯ್ಕ, ರತ್ನ ಜೆ.ಆರ್, ಶಶಿಕಲಾ, ಗಿರಿಜಾ, ಬೇಬಿ, ಕಮಲ, ರವಿ , ಸ್ತ್ರಿಶಕ್ತಿ ಸದಸ್ಯರು, ಮಕ್ಕಳು, ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಶಿಷ್ಟಚೇತನ ಹರ್ಷಿತಾ ಅವರನ್ನು ಗೌರವಿಸಲಾಯಿತು. ವಿಶಿಷ್ಟಚೇತನ ಶೋಭಾ ಅವರ ಮನೆಗೆ ಆಹಾರದ ಕಿಟ್ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here