ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್‌ನಿಂದ ಬಡ ರೋಗಿಗಳಿಗೆ, ಅಸಕ್ತರಿಗೆ ದಿನಸಿ ಸಾಮಗ್ರಿಗಳ ಕಿಟ್ ನೆರವಿನ ಹಸ್ತ

0

ಪುತ್ತೂರು : ಪುತ್ತೂರಿನಲ್ಲಿ ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್‌ನ ಆರನೇ ಕಾರ್ಯಕ್ರಮ ಬಡ ರೋಗಿಗಳಿಗೆ ಮತ್ತು ಅಸಕ್ತರಿಗೆ ದಾನಿಗಳ ಸಹಕಾರದಿಂದ ದಿನಸಿ ಸಾಮಗ್ರಿಗಳ ಕಿಟ್ ನೆರವಿನ ಹಸ್ತ ಸೆ.18ರಂದು ಪುತ್ತೂರಿನ ರೋಟರಿ ಟ್ರಸ್ಟ್ ಹಾಲ್‌ನಲ್ಲಿ ನಡೆಯಿತು. ಕೊಂಬೆಟ್ಟು ರಾಮಕೃಷ್ಣ ಸೇವಾ ಸಮಾಜದ ಕಾರ್ಯದರ್ಶಿಗಳಾದ ಗುಣಪಾಲ್ ಜೈನ್ ಹಾಗೂ ಆರ್ಯಾಪು ಗ್ರಾಮದ ಕೃಷಿ ವಿಪತ್ತು ಸಂಘದ ಮ್ಯಾನೇಜರ್ ಅಜಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

 

ಸ್ಪಂದನ ಸಹಾಯ ನಿಧಿ ಸೇವಾ ಟ್ರಸ್ಟ್‌ನ ಅಧ್ಯಕ್ಷೆ ಸುಮಿತ್ರಾ ಎಸ್., ಖಜಾಂಜಿ ಕಾವ್ಯ, ಗೌರವ ಸಲಹೆಗಾರ ಶಿವಶಂಕರ್ ಶರ್ಮ, ಸಂಘಟನಾ ಕಾರ್ಯದರ್ಶಿ ಇಂದಿರಾ, ಕಾರ್ಯದರ್ಶಿಗಳಾದ ರುಕ್ಮಯ ಕೆ., ಸದಸ್ಯರಾದ ವಸುದ, ಸಂಚಾಲಕ ಅವಿನಾಶ್ ಉಪಸ್ಥಿತರಿದ್ದರು. ಗೌರವ ಸಲಹೆಗಾರ ಶಿವಶಂಕರ ಶರ್ಮ ನಿರೂಪಿಸಿದರು.

LEAVE A REPLY

Please enter your comment!
Please enter your name here