ಶರವೂರು ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಬಿಎಂಎಸ್ ವತಿಯಿಂದ ಶ್ರಮದಾನ

0

ಪುತ್ತೂರು: ಶಿವರಾತ್ರಿ ಹಿನ್ನೆಲೆಯಲ್ಲಿ ಭಾರತೀಯ ಮಜ್ದೂರು ಸಂಘದ ಆಲಂಕಾರು ಘಟಕದ ವತಿಯಿಂದ ಶರವೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಠಾರದಲ್ಲಿ ಸೆ.19ರಂದು ಶ್ರಮದಾನ ನಡೆಯಿತು.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬ ಹಾಗೂ ವಿಶ್ವಕರ್ಮ ದಿನಾಚರಣೆ ಪ್ರಯುಕ್ತ ದೇವಸ್ಥಾನದ ವಠಾರದಲ್ಲಿ ಬಿಎಂಎಸ್ ಕಾರ್ಯಕರ್ತರು ಶ್ರಮದಾನ ನೆರವೇರಿಸಿದರು. ಈ ಸಂದರ್ಭದಲ್ಲಿ ಬಿಎಂಎಸ್ ಆಲಂಕಾರು ಘಟಕದ ಅಧ್ಯಕ್ಷ ಜನಾರ್ದನ ಗೌಡ ಕಯ್ಯಪೆ, ತಾಲೂಕು ಮುಖಂಡ ಚಂದ್ರ ಯಾನೆ ನೋಣಯ್ಯ ಏಣಿತಡ್ಕ, ಕಾರ್ಯದರ್ಶಿ ಮಹೇಶ್ ನೆಕ್ಕಿಲಾಡಿ, ಕೋಶಾಧಿಕಾರಿ ಹರೀಶ್ ಏಣಿತಡ್ಕ, ಸಂಘಟನಾ ಕಾರ್ಯದರ್ಶಿ ಶೀನಪ್ಪ ಕುಂಬಾರ, ಉಪಾಧ್ಯಕ್ಷ ಜನಾರ್ದನ ದೇವಾಡಿಗ, ಸದಸ್ಯರಾದ ಪ್ರವೀಣ್, ಜಯಂತ ಪೂಜಾರಿ ನೆಕ್ಕಿಲಾಡಿ, ದಿನೇಶ್ ದೇವಾಡಿಗ, ಕೃಷ್ಣ ಕೆ, ಪುರುಷೋತ್ತಮ, ಸುರೇಶ್ ಅತ್ರಿಜಾಲು ಮತ್ತಿತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here