ಪುತ್ತೂರು: ಬಂಟ್ವಾಳ ತಾಲೂಕಿನ ಇಡ್ಕಿದು ಗ್ರಾಮದಲ್ಲಿ ಒಕ್ಕಲಿಗ ಸ್ವಸಹಾಯ ಸಂಘಗಳ ಒಕ್ಕೂಟದ ಪದಾಧಿಕಾರಿಗಳ ಆಯ್ಕೆ ನಡೆಯಿತು. ಒಕ್ಕೂಟದ ಅಧ್ಯಕ್ಷರಾಗಿ ಪೂವಪ್ಪ ಗೌಡ ಸೂರ್ಯ, ಕಾರ್ಯದರ್ಶಿಯಾಗಿ ಭಾರತಿ ಉರಿಮಜಲು, ಉಪಾಧ್ಯಕ್ಷರಾಗಿ ಲಿಂಗಪ್ಪ ಗೌಡ ಸೂರ್ಯ, ಜೊತೆ ಕಾರ್ಯದರ್ಶಿಯಾಗಿ ಸುಶ್ಮಿತಾ ಪೊಯ್ಯೆ, ಕೋಶಾಧಿಕಾರಿಯಾಗಿ ಮಹಾಬಲ ಗೌಡ ಬೀಡಿನಮಜಲುರವರನ್ನು ಆಯ್ಕೆ ಮಾಡಲಾಯಿತು. ಗೀತಾಂಜಲಿ, ಗೀತಾ, ವೆಂಕಟ್ರಮಣ, ಯಾದವ, ಶ್ರುತಾಲಿ ಎ.ಆರ್., ನಾರಾಯಣ ಗೌಡ ಉಪಸ್ಥಿತರಿದ್ದರು. ಮೇಲ್ವಿಚಾರಕಿ ಸುಮಲತಾ ಒಕ್ಕೂಟ ಹಾಗೂ ತ್ರೈಮಾಸಿಕ ಸಭೆಯ ಮಾಹಿತಿ ತಿಳಿಸಿದರು. ಪ್ರೇರಕಿ ಮೋಹಿನಿ ಮಾತನಾಡಿ ಶುಭಹಾರೈಸಿದರು. ಭಾರತಿ ಸ್ವಾಗತಿಸಿ ಲಿಂಗಪ್ಪ ಗೌಡ ವಂದಿಸಿದರು.