ಆಲಂಕಾರು: ಒಮ್ನಿ ಡಿಕ್ಕಿ, ಸ್ಕೂಟರ್ ಸವಾರೆಗೆ ಗಾಯ

0

ಪುತ್ತೂರು: ಒಮ್ನಿ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರೆಯೊಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಸೆ.20ರಂದು ಬೆಳಿಗ್ಗೆ ಆಲಂಕಾರು ಗ್ರಾಮದ ಬುಡೇರಿಯಾ ಕ್ರಾಸ್‌ನಲ್ಲಿ ನಡೆದಿದೆ.

ಬುಡೇರಿಯ ನಿವಾಸಿ ತೀರ್ಥಕುಮಾರಿ ಗಾಯಗೊಂಡವರಾಗಿದ್ದಾರೆ. ಇವರು ತನ್ನ ಸ್ಕೂಟರ್(ಕೆಎ 21 ಇಸಿ 2767)ನಲ್ಲಿ ಮನೆಯಿಂದ ಆಲಂಕಾರು ಕಡೆಗೆ ಹೋಗುತ್ತಿದ್ದ ವೇಳೆ ಬುಡೇರಿಯಾ ಕ್ರಾಸ್ ಬಳಿ ಆಲಂಕಾರು ಕಡೆಗೆ ಬಲಬದಿಯ ಇಂಡಿಕೇಟರ್ ಹಾಕಿ ಸ್ಕೂಟರ್ ತಿರುಗಿಸುತ್ತಿದ್ದಾಗ ಆಲಂಕಾರು ಕಡೆಯಿಂದ ಬಂದ ಒಮ್ನಿ (ಕೆಎ21 ಎ 9264) ಕಾರು ಸ್ಕೂಟರ್‌ಗೆ ಡಿಕ್ಕಿಯಾಗಿದೆ ಎಂದು ವರದಿಯಾಗಿದೆ. ಒಮ್ನಿ ಡಿಕ್ಕಿಯಾದ ಪರಿಣಾಮ ಸ್ಕೂಟರ್ ಸವಾರೆ ತೀರ್ಥಕುಮಾರಿಯವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದಿದ್ದು ಅವರ ಬಲ ಕೈಗೆ ಗಾಯವಾಗಿದೆ. ಗಾಯಾಳು ತೀರ್ಥಕುಮಾರಿಯವರು ಪುತ್ತೂರು ಆದರ್ಶ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬುಡೇರಿಯಾ ಸರ್ವಲ್ತಾಡಿ ನಿವಾಸಿ ವಸಂತ ಗೌಡ ಎಂಬವರು ನೀಡಿದ ದೂರಿನಂತೆ ಕಡಬ ಪೊಲೀಸ್ ಠಾಣೆಯಲ್ಲಿ ಕಲಂ: 279.337 ಐಪಿಸಿಯಂತೆ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here