ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದ ಬ್ರಹ್ಮಕಲಶೋತ್ವದ ಹಿನ್ನೆಲೆ ಕಾಸರಗೋಡು ಕಾಳ್ಯಂಗಾಡು ವಲಯ ಸಮಿತಿ ರಚನೆ

0

ವಿಟ್ಲ: ಮಾಣಿಲ ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ಕ್ಷೇತ್ರದಲ್ಲಿ 2023ರ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರ ಮಾರ್ಗದರ್ಶನದಂತೆ ಕಾಸರಗೋಡು ಕಾಳ್ಯಂಗಾಡು ಶ್ರೀ ಮೂಕಾಂಬಿಕ ಕ್ಷೇತ್ರದಲ್ಲಿ ವಲಯ ಸಮಿತಿಯ ರಚನೆ ಮಾಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಮೂಕಾಂಬಿಕ ಕ್ಷೇತ್ರದ ಧರ್ಮದರ್ಶಿ ಶ್ರೀ ನಾರಾಯಣಪೂಜಾರಿ ರವರು ವಹಿಸಿದರು. ಕುಕ್ಕಾಜೆ ಕ್ಷೇತ್ರದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಕ್ಷೇತ್ರದ ಜೀರ್ಣೋದ್ಧಾರದ ಬಗ್ಗೆ ಹಾಗೂ ಬ್ರಹ್ಮಕಲಶೋತ್ಸವದ ಬಗ್ಗೆ ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಕಾಸರಗೋಡು ಜಿಲ್ಲಾ ಬಿಲ್ಲವ ಸೇವಾ ಸಂಘದ ಅಧ್ಯಕ್ಷರು ಕೆ ಕಮಲಾಕ್ಷ ಸುವರ್ಣ, ಕೆ ಭಾಸ್ಕರ ಕಾಸರಗೋಡು, ಪುಷ್ಪ ಕಾಳ್ಯಂಗಾಡು ಮೊದಲಾದವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕಾಸರಗೋಡು ಕಾಳ್ಯಂಗಾಡು ವಲಯ ಸಮಿತಿಯನ್ನು ರಚಿಸಲಾಯಿತು.

ವಲಯ ಸಮಿತಿಯ ಗೌರವ ಅಧ್ಯಕ್ಷರಾಗಿ ನಾರಾಯಣ ಪೂಜಾರಿ ಕಾಳ್ಯಂಗಾಡು, ಅಧ್ಯಕ್ಷರಾಗಿ ಸುರೇಶ್ ಕಾಸರಗೋಡು, ಉಪಾಧ್ಯಕ್ಷರು ಗಣೇಶ್ ಸಣ್ಣಕುಡ್ಲು, ಕೆ. ಕಮಲಾಕ್ಷ ಸುವರ್ಣ, ಶ್ಯಾಮ್ ಅಶೋಕನಗರ, ಕರುಣಾಕರ ಪಾಯ್ಚಾಲು, ತಾರನಾಥ ಗಂಗೆ , ಕಾರ್ಯದರ್ಶಿಯಾಗಿ ಭಾಸ್ಕರ ಕೆ ಕಾಸರಗೋಡು, ಜತೆ ಕಾರ್ಯದರ್ಶಿಯಾಗಿ ನ್ಯಾಯವಾದಿ ಹರ್ಷಿತಾ , ಶಿವರಾಮ ಕಾಸರಗೋಡು, ಭವಾನಿ, ನಾರಾಯಣ, ಮಿಥುನ್ ಕಾಳ್ಯಂಗಾಡು, ಗೋವಿಂದ ನಾಯಕ್, ಕೋಶಾಧಿಕಾರಿ ಲವ ಮೀಪುಗುರಿ ಹಾಗೂ 20 ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡಲಾಯಿತು ಭಾಸ್ಕರ ಕ್ಕೆ ಸ್ವಾಗತಿಸಿ, ಹರ್ಷಿತಾ ವಂದಿಸಿದರು.

LEAVE A REPLY

Please enter your comment!
Please enter your name here