ಅಳಕೆಮಜಲು ಶ್ರೀ ಶಾರದಾಂಬ ಭಜನಾ ಮಂಡಳಿಯಲ್ಲಿ 49ನೇ ವರ್ಷದ ನವರಾತ್ರಿ ಉತ್ಸವ, ಶಾರದೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ವಿಟ್ಲ: ಅಳಕೆಮಜಲು ಅಶೋಕನಗರ ಶ್ರೀ ಶಾರದಾಂಬ ಭಜನಾ ಮಂಡಳಿಯಲ್ಲಿ ಸೆ.26ರಿಂದ ಅ.4ರ ವರೆಗೆ ನಡೆಯಲಿರುವ 40ನೇ ವರ್ಷದ ನವರಾತ್ರಿ ಉತ್ಸವ ಹಾಗೂ ಶಾರದೋತ್ಸವದ ಆಮಂತ್ರಣ ಪತ್ರಿಕೆಯನ್ನು ಭಜನಾಮಂಡಳಿಯಲ್ಲಿ ಬಿಡುಗಡೆ ಮಾಡಲಾಯಿತು.


ಭಜನಾ ಮಂಡಳಿಯ ಗೌರವಾಧ್ಯಕ್ಷರಾದ ಸೋಮಶೇಖರ್ ಶೆಟ್ಟಿ ಅಳಕೆ ಮಜಲು, ಗೌರವ ಸಲಹೆಗಾರರಾದ ಪಿ. ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು. ಅಧ್ಯಕ್ಷರಾದ ಜಗದೀಶ್ ಪೂಜಾರಿ, ಕಾರ್ಯದರ್ಶಿ ತಿರುಮಲೇಶ್ವರ ನಾಯ್ಕ್ ಅಳಕೆಮಜಲು, ಉಪಾಧ್ಯಕ್ಷರಾದ ಬಾಸ್ಕರ ರೈ ಅಳಕೆಮಜಲು, ಖಜಾಂಜಿ ಸುಧೀರ್ ಕುಮಾರ್ ಕೆಮನಾಜೆ, ಜೊತೆಕಾರ್ತದರ್ಶಿ ದಿನೇಶ್ ಪೆಲತ್ತಿಂಜ,ಶ್ರೀ ಶಾರದಾಂಬ ಮಹಿಳಾ ಸಮಿತಿಯ ಅಧ್ಯಕ್ಷರಾದ ಸುಗಂಧಿನಿ, ಕಾರ್ಯದರ್ಶಿ ವನಿತಾ ಜೇಡರಕೋಡಿ, ಉಪಾಧ್ಯಕ್ಷರಾದ ಶ್ವೇತಾ ಕೆಮನಾಜೆ, ಖಜಾಂಜಿ ಮೋಹಿನಿ ಪೆಲತ್ತಿಂಜ, ಜೊತೆ ಕಾರ್ಯದರ್ಶಿ ಚಂದ್ರಾವತಿ ಪುಂಡಿಕಾಯಿ ಗ್ರಾಮಸ್ಥರಾದ ಸತೀಶ್ ನಾಯ್ಕ್ ಅಳಕಜಲು, ಕೃಷ್ಣಪ್ಪ ಕೆಮನಾಜೆ, ಕೃಷ್ಣಪ್ಪ ಕುಲಾಲ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here