ಸೆ.25:ಡಾ.ಎ.ಪಿ ಭಟ್‌ರವರ ಕೃತಿ ವೈದ್ಯರ ಚೌ ಚೌ ಬಾತ್ ಬಿಡುಗಡೆ, ಉಪನ್ಯಾಸ ಕಾರ್ಯಕ್ರಮ

0

ಪುತ್ತೂರು: ಪುತ್ತೂರು ಸಿಟಿ ಆಸ್ಪತ್ರೆಯ ವೈದ್ಯಕೀಯ ತಜ್ಞ ಡಾ.ಎ.ಪಿ ಭಟ್‌ರವರ ಕೃತಿ `ವೈದ್ಯರ ಚೌ ಚೌ ಬಾತ್’ ಬಿಡುಗಡೆ ಮತ್ತು ಉಪನ್ಯಾಸ ಕಾರ್ಯಕ್ರಮವು ಸೆ.೨೫ ರಂದು ಸಂಜೆ ದರ್ಬೆ ವಿದ್ಯಾನಗರ ಬಹುವಚನಂ ಪದ್ಮಿನೀ ಸಭಾಭವನದಲ್ಲಿ ಜರಗಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ.ಸುಲೇಖಾ ವರದರಾಜ್‌ರವರು ವಹಿಸಿಕೊಳ್ಳಲಿದ್ದು, ಪುಸ್ತಕ ಪರಿಚಯವನ್ನು ನ್ಯಾಯವಾದಿ ಭಾಸ್ಕರ ಕೋಡಿಂಬಾಳರವರು ಮಾಡಲಿರುವರು. ಈ ಸಂದರ್ಭದಲ್ಲಿ ಡಾ.ಎ.ಪಿ ಭಟ್‌ರವರ ಕೃತಿಗಳು ರಿಯಾಯಿತಿ ದರದಲ್ಲಿ ಲಭ್ಯವಿರುತ್ತದೆ ಎಂದು ಪ್ರಕಟಣೆ ತಿಳಿಸಿದೆ.

 

LEAVE A REPLY

Please enter your comment!
Please enter your name here