ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಪುತ್ತೂರು ಶಾಖಾ ಕಛೇರಿಯ ಪ್ರಭಂಧಕ ವಿ.ಚಂದ್ರಶೇಖರ ಶೆಟ್ಟಿಗೆ ಪದೋನ್ನತಿ

0

ಪುತ್ತೂರು : ಪುತ್ತೂರು ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್ ಪುತ್ತೂರು ಶಾಖಾ ಕಛೇರಿಯ ಪ್ರಭಂಧಕ ವಿ.ಚಂದ್ರಶೇಖರ ಶೆಟ್ಟಿರವರು ಡೆಪ್ಯೂಟಿ ಮೆನೇಜರ್ ಆಗಿ ಪದೋನ್ನತಿಗೊಂಡು ಬೆಂಗಳೂರು ಪ್ರಾದೇಶಿಕ ಕಛೇರಿಗೆ ವರ್ಗಾವಣೆಗೊಂಡಿದ್ದಾರೆ. ಇವರು ಕಳೆದ ೩ ವರ್ಷದಿಂದ ಪುತ್ತೂರು ಶಾಖಾ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ಮೂಲತಹ ವಿಟ್ಲ ನಿವಾಸಿಯಾಗಿರುವ ಇವರು ಪುತ್ತೂರಿನಲ್ಲಿ ವಾಸವಾಗಿದ್ದಾರೆ.

ಪುತ್ತೂರು ಶಾಖೆಯು ಬೆಂಗಳೂರು ಪ್ರಾದೇಶಿಕ ಮಟ್ಟದಲ್ಲಿ ಸಾಮಾನ್ಯ ವಿಮಾ ವ್ಯವಹಾರದಲ್ಲಿ ಕಳೆದ ೫ ವರ್ಷಗಳಿಂದ ಅಗ್ರಸ್ಥಾನದಲ್ಲಿದೆ. ಖಾಸಗಿ ಕಂಪೆನಿಗಳ ಪೈಪೋಟಿಯ ಮಧ್ಯೆಯೂ ಆ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಶಾಖಾ ಸಿಬಂದಿಗಳು, ವಿಮಾ ಪ್ರತಿನಿಧಿಗಳು ಸಹಕಾರ ನೀಡಿದ್ದಾರೆ – ವಿ.ಚಂದ್ರಶೇಖರ ಶೆಟ್ಟಿ

LEAVE A REPLY

Please enter your comment!
Please enter your name here