ಕೋಡಿಂಬಾಡಿ ಗ್ರಾ.ಪಂ ವ್ಯಾಪ್ತಿಯಲ್ಲಿ ರೂ.2.902ಕೋಟಿಯ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ

0

ಪುತ್ತೂರು: ಕೋಡಿಂಬಾಡಿ ಹಾಗೂ ಬೆಳ್ಳಿಪ್ಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸೆ.30ರಂದು ಶಾಸಕ ಸಂಜೀವ ಮಠಂದೂರುರವರು ರೂ.2.90ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದರು.

ಬೆಳ್ಳಿಪ್ಪಾಡಿ ಗ್ರಾಮದಲ್ಲಿ ರೂ.10ಲಕ್ಷದ ಬೇರಿಕೆ ಕಾರ್ನೋಜಿ ರಸ್ತೆ ಅಭಿವೃದ್ಧಿ, ರೂ.10ಲಕ್ಷದ ಕುಂಡಾಪು ರಸ್ತೆ ಅಭಿವೃದ್ಧಿ, ರೂ.1.70 ಕೋಟಿಯಲ್ಲಿ ಬೆಳ್ಳಿಪ್ಪಾಡಿ ಮುಖ್ಯ ರಸ್ತೆ ಅಭಿವೃದ್ಧಿ, ರೂ.10ಲಕ್ಷದ ದೇವಸ್ಯ ರಸ್ತೆ ಅಭಿವೃದ್ಧಿ, ರೂ.10 ಲಕ್ಷದ ಅಂದ್ರಿಗೇರು ರಸ್ತೆ ಅಭಿವೃದ್ಧಿ, ರೂ.10ಲಕ್ಷ ಕೈಲಾಜೆ-ಮುಳುವೇಲು ರಸ್ತೆ ಅಭಿವೃದ್ಧಿ, ರೂ.10ಲಕ್ಷದ ಅರ್ಬಿ-ಕಜೆ ರಸ್ತೆ ಅಭಿವೃದ್ಧಿ, ಕೋಡಿಂಬಾಡಿ ಗ್ರಾಮದಲ್ಲಿ ರೂ.10ಲಕ್ಷದ ನಿಡ್ಯ-ಪಾದೆ ರಸ್ತೆ ಅಭಿವೃದ್ಧಿ, ಮೋನಡ್ಕ-ಚೀಮುಳ್ಳು ರಸ್ತೆ ಅಭಿವೃದ್ಧಿ ಹಾಗೂ ರೂ.೩೦ಲಕ್ಷದ ಕೋಡಿಂಬಾಡಿ ಶಾಲಾ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆವೇರಿತು.

ಜಿ.ಪಂ ಮಾಜಿ ಸದಸ್ಯೆ ಶಯನಾ ಜಯಾನಂದ ಶಯನ ಜಯಾನಂದ, ತಾ.ಪಂ ಮಾಜಿ ಅಧ್ಯಕ್ಷ ಜಯಾನಂದ ಕೋಡಿಂಬಾಡಿ, ಮಾಜಿ ಸದಸ್ಯ ಲಕ್ಷ್ಮಣ ಗೌಡ ಕಂಬಳತ್ತಡ್ಡ, ಕೋಡಿಂಬಾಡಿ ಗ್ರಾ.ಪಂ ಅಧ್ಯಕ್ಷ ರಾಮಚಂದ್ರ ಪೂಜಾರಿ, ಉಪಾಧ್ಯಕ್ಷ ಉಷಾ ಲಕ್ಷ್ಮಣ್, ಸದಸ್ಯರಾದ ರಾಮಣ್ಣ ಗೌಡ ಗುಂಡೊಳೆ, ವಿಶ್ವನಾಥ್ ಕೃಷ್ಣಗಿರಿ, ಮೋಹಿನಿ ಜನಾರ್ದನ, ಮಾಜಿ ಸದಸ್ಯರಾದ ಸುಂದರ ಸಾಲ್ಯಾನ್ ಬರ್ಪಾದೆ , ಮನೋಹರ್ ಡಿ.ವಿ., ಬಿಜೆಪಿ ಶಕ್ತಿ ಕೇಂದ್ರ ಸಂಚಾಲಕ ಮೋಹನ ಪಕ್ಕಳ, ಬೂತ್ ಅಧ್ಯಕ್ಷ ಜನಾರ್ಧನ ಗೌಡ, ಲಕ್ಷ್ಮೀಶ ಗೌಡ, ಪ್ರದೀಪ್ ಶೆಟ್ಟಿ, ಭರತ್ ನಿಡ್ಯ ಕಾರ್ಯದರ್ಶಿಗಳಾದ ದಯಾನಂದ ಕಲ್ಲಾಜೆ, ರಾಜೇಶ ಪಾದೆ, ಸಂದೀಪ್ ಶಾಂತಿನಗರ, ಜಯಾನಂದ ಕೋಡಿ, ಪ್ರಮುಖರಾದ ಮಾರ್ಸೆಲ್ ವೇಗಸ್, ವೆಂಕಪ್ಪ ಗೌಡ ದೇವಸ್ಯ, ಕೊರಗಪ್ಪ ದೇವಸ್ಯ, ಗಂಗಯ್ಯ ಗೌಡ ನೆಲಡ್ಕ, ಶ್ರೀನಿವಾಸ ಶೆಟ್ಟಿ ಕಠಾರ, ಪ್ರವೀಣ್ ಶೆಟ್ಟಿ ಕಠಾರ, ಚಂದನ್ ತೆಂಕಪ್ಪ್ಪಾಡಿ, ಬಾಲಕೃಷ್ಣ ಗೌಡ ಮಳುವೇಳು, ವಸಂತ ಗೌಡ ಪೊಳ್ಯ ಸೇರಿದಂತೆ ಕಾರ್ಯಕರ್ತರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here