ಮುಂಡೂರು: ಒಕ್ಕಲಿಗ ಸ್ವ ಸಹಾಯ ಸಂಘ ರಚನೆ

0

ಪುತ್ತೂರು: ಮುಂಡೂರು ಗ್ರಾಮದ ಬಂಡಿಕಾಣ ಮೋನಪ್ಪಗೌಡರ ಮನೆಯಲ್ಲಿ “ಸಿಂಚನ” ಒಕ್ಕಲಿಗ ಸ್ವ ಸಹಾಯ ಸಂಘವನ್ನು ಉದ್ಘಾಟಿಸಲಾಯಿತು.

ಗ್ರಾಮಾಧ್ಯಕ್ಷ ರಮೇಶ್ ಗೌಡ ಪಜಿಮಣ್ಣು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಪುಸ್ತಕ ಹಸ್ತಾಂತರ ಮಾಡಿದರು. ಸಂಘದ ಅಧ್ಯಕ್ಷರಾಗಿ ಪದ್ಮಾವತಿ ಮೋನಪ್ಪ ಗೌಡ ಬಂಡಿಕಾಣ ಕಾರ್ಯದರ್ಶಿಯಾಗಿ ವಿಮಲ ಲೋಕಯ್ಯ ಗೌಡ ಕಡ್ಯ, ಸದಸ್ಯರುಗಳಾಗಿ ಜಯಲಕ್ಷ್ಮಿ, ಜಯಂತಿ, ಪ್ರಿಯಾ, ನಿಖಿತಾ, ಭವಾನಿ, ಸಂಪ್ರೀತ್, ಗೌತಮ್, ಲೋಕಯ್ಯ ಗೌಡ, ರಮೇಶ್ ಗೌಡ ಸೇರ್ಪಡೆಯಾದರು. ಒಕ್ಕಲಿಗ ಸ್ವ ಸಹಾಯ ಟ್ರಸ್ಟ್‌ನ ಸಲಹಾ ಸಮಿತಿಯ ಸದಸ್ಯರಾದ ವೆಂಕಪ್ಪಗೌಡ ಕೆಯ್ಯೂರು ಅಭಿನಂದಿಸಿ ಶುಭಹಾರೈಸಿದರು. ಪುತ್ತೂರು ವಲಯ ಪ್ರೇರಕಿ ನಮಿತಾ ಗೌಡ ಸಂಘದ ನಿಯಮ ತಿಳಿಸಿ, ವಂದಿಸಿದರು.

LEAVE A REPLY

Please enter your comment!
Please enter your name here