ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ನಿಂದ ಜ್ಯೂ. ಗಾನ ಕೋಗಿಲೆ ದಿವ್ಯಶ್ರೀ ಶೆಟ್ಟಿಯವರಿಗೆ ಸನ್ಮಾನ

0

ಪುತ್ತೂರು: ರಕ್ತ ಸಂಜೀವಿನಿ ಬ್ಲಡ್ ಗ್ರೂಪ್ ಪುತ್ತೂರು ಇದರ ವತಿಯಿಂದ ಯುವ ಗಾಯಕಿ ಜ್ಯೂನಿಯರ್ ಗಾನ ಕೋಗಿಲೆ ದಿವ್ಯಶ್ರೀ ಶೆಟ್ಟಿ ವಾಮದಪದವು ರವರ ಕಲಾ ಸೇವೆಯನ್ನು ಮೇಘಾಲಯ ಮೆಲೋಡಿಸ್ ಪೇಜ್ ಕೊಟ್ಟರ ಚೌಕಿ ತಣ್ಣೀರು ಬಾವಿ ಮಂಗಳೂರಿನಲ್ಲಿ ಗುರುತಿಸಲಾಯಿತು. ಮುಖ್ಯ ಅತಿಥಿಯಾಗಿ ಸಮಾಜ ಸೇವಕಿ ಸೀತಾ ಭಟ್ ಆರ್ಲಪದವು ಉಪಸ್ಥಿತರಿದ್ದರು.  ಮೇಘಾಲಯ ಮೆಲೋಡಿಸ್ ಸಂಚಾಲಕರಾದ ಲಿತೀಶ್ ಅಣ್ಣ ಹಾಗೂ ಕಾರ್ಯಕ್ರಮದ ರೂವಾರಿಯಾದ ನವೀನ್ ಪುತ್ತೂರು ಅವರು ಅತಿಥಿಗಳಿಗೆ ಹೂ ನೀಡಿದರು. ಚಿತ್ರನಟ ಕಲಾವಿದ ಕೃಷ್ಣಪ್ಪ ಶಿವನಗರ ಹಾಗೂ ಶ್ರೀಕೃಷ್ಣ ಯುವಕ ಮಂಡಲ ಸೀಟಿಗುಡ್ಡೆಯ ಅಧ್ಯಕ್ಷ ಬಿ ರಾಜೀವ ಗೌಡ ಹಾಗೂ ಬೊಳುವಾರು ಸ್ನೇಹ ಸಿಲ್ಕ್ ಅಂಡ್ ರೆಡಿಮೇಡ್ ನ ಉದ್ಯೋಗಿ ದಿವ್ಯ ಶೆಟ್ಟಿ ಅವರ ತಂದೆ ತಾಯಿಯಾದ ಬಾಬು ಶೆಟ್ಟಿ, ಮಮತಾ ಶೆಟ್ಟಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here