ಕಾಣಿಯೂರು ಪ್ರಗತಿಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಆಚರಣೆ, ಸ್ವಚ್ಛತಾ ಜಾಥ, ಶಾರದಾ ಪೂಜೆ, ಆಯುಧ ಪೂಜೆ

0

ಕಾಣಿಯೂರು: ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಯಲ್ಲಿ ಗಾಂಧಿ ಜಯಂತಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿ ಆಚರಣೆ ಮತ್ತು ಸ್ವಚ್ಛತಾ ಜಾಥ. ಸಡಗರ ಸಂಭ್ರಮದ ಭಕ್ತಿ ಪ್ರಧಾನವಾದ ಗಣಪತಿ ಹವನ ಶಾರದಾ ಪೂಜೆ ಮತ್ತು ಆಯುಧ ಪೂಜೆ ನಡೆಯಿತು.

ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ಜಯಸೂರ್ಯ ರೈ ಮಾದೋಡಿ, ಶಾಲಾ ಆಡಳಿತ ಮಂಡಳಿಯ ಟ್ರಸ್ಟಿ ವೃಂದಾ ಜೆ ರೈ , ಶಾಲಾಡಳಿತಾಧಿಕಾರಿ ವಸಂತ ರೈ ಕಾರ್ಕಳ , ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಉಮೇಶ್ ಕೆ ಎಂ ಬಿ, ಮುಖ್ಯಗುರು ಸರಸ್ವತಿ ಎಂ ಹಾಗೂ ಶಿಕ್ಷಕ ವೃಂದದವರು, ಶಿಕ್ಷಕೇತರ ವೃಂದದವರು, ಪೋಷಕ ಬಂಧುಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಶಿಕ್ಷಕಿಯರಾದ ಜಯಶೀಲ ಮತ್ತು ಕವಿತಾ ವಿ. ರೈ ಸಂಘಟಿಸಿದರು. ಕಾರ್ಯಕ್ರಮದ ವಿಶೇಷವಾಗಿ ಕುಣಿತ ಭಜನೆ ಆಕರ್ಷಣೀಯವಾಗಿತ್ತು. ವಿದ್ಯಾರ್ಥಿಗಳು ಮತ್ತು ಶಿಕ್ಷಕರ ವೃಂದ ಭಜನೆಯನ್ನು ನಡೆಸಿಕೊಟ್ಟರು. ಕಟ್ಟತ್ತಾರು ಪ್ರಶಾಂತ್ ಭಟ್ ಪೌರೋಹಿತ್ಯವನ್ನು ವಹಿಸಿದರು. ಸದಾನಂದ ಆಚಾರ್ಯ ಕಾಣಿಯೂರು ಸಹಕಸಿದರು.

LEAVE A REPLY

Please enter your comment!
Please enter your name here