ಪುತ್ತೂರು: ಕುಂಬ್ರ ಸಮೀಪದ ಸಾರೆಪುಣಿಯ ವಿದ್ಯಾರ್ಥಿ ಮಹಮ್ಮದ್ ಜವಾದ್ ಎಂಬವರು ತಾನು ರಚಿಸಿದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿಯವರ ಕಾರ್ಟೂನ್ ಚಿತ್ರವನ್ನು ರಾಹುಲ್ ಗಾಂಧಿಯವರಿಗೆ ನೀಡಿದ್ದಾರೆ. ಭಾರತ್ ಜೋಡೋ ಯಾತ್ರೆ ಗುಂಡ್ಲುಪೇಟೆ ತಲುಪಿದ ಸಂದರ್ಭದಲ್ಲಿ ರಾಹುಲ್ ಗಾಂಧಿಯವರಿಗೆ ಮಹಮ್ಮದ್ ಜವಾದ್ ನೀಡಿದ್ದು ಈ ವೇಳೆ ರಾಹುಲ್ ಖುಷಿಯಿಂದಲೇ ಅದನ್ನು ಸ್ವೀಕರಿಸಿದ್ದಾರೆ. ಮಹಮ್ಮದ್ ಜವಾದ್ ಅವರು ಎನ್ಎಸ್ಯುಐ ಪುತ್ತೂರು ವಿಧಾನಸಭಾ ಕ್ಷೇತ್ರದ ಉಪಾಧ್ಯಕ್ಷರಾಗಿದ್ದಾರೆ.