ಸುದ್ದಿ ಬಿಡುಗಡೆ ಪ್ರಧಾನ ಕಚೇರಿಯಲ್ಲಿ ಆಯುಧ ಪೂಜೆ

0

ಪುತ್ತೂರು: ಜಗತ್ತಿನೆಲ್ಲೆಡೆ ಇರುವ ಪುತ್ತೂರಿನವರು ಓದುವ ತಾಲೂಕಿನ ನಂ.1 ಕನ್ನಡ ದಿನಪತ್ರಿಕೆಯಾಗಿರುವ ಸುದ್ದಿ ಬಿಡುಗಡೆ ಪತ್ರಿಕಾ ಪ್ರಧಾನ ಕಚೇರಿಯಲ್ಲಿ ಅ.4ರಂದು ಆಯುಧ ಪೂಜೆ ನಡೆಯಿತು.

ವೇ ಮೂ ವಿಷ್ಣುಪ್ರಸಾದ್ ಅವರ ಪುರೋಹಿತ್ವದಲ್ಲಿ ಬೆಳಿಗ್ಗೆ ಗಣಪತಿ ಹೋಮ ನಡೆಯಿತು. ಸಂಸ್ಥೆ ತಾಂತ್ರಿಕ ಉಪಕರಣಗಳಿಗೆ ಹಾಗು ವಾಹನಗಳಿಗೆ ಆಯುಧ ಪೂಜೆ ನಡೆಯಿತು. ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ.ಶಿವಾನಂದ, ಶೋಭಾ ಶಿವಾನಂದ ದಂಪತಿ ಸಹಿತ ಸಿಇಒ ಸೃಜನ್ ಊರುಬೈಲು, ಬೆಳ್ತಂಗಡಿ ಸುದ್ದಿ ಸಂಸ್ಥೆಯ ಸಿಇಒ ಸಿಂಚನಾ ಊರುಬೈಲು ಪೂಜೆಯಲ್ಲಿ ಪಾಲ್ಗೊಂಡರು. ಸುದ್ದಿ ಬಿಡುಗಡೆ ಮತ್ತು ಮೀಡಿಯಾ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಗಣಪತಿ ಹವನ ನಡೆಯುವ ಸಂದರ್ಭ ಸುದ್ದಿ ಸಿಬ್ಬಂದಿಗಳಿಂದ ಭಜನಾ ಕಾರ್ಯಕ್ರಮ ನಡೆಯಿತು.

LEAVE A REPLY

Please enter your comment!
Please enter your name here