ಬನ್ನೂರು ರೈತರ ಸೇ.ಸಹಕಾರಿ ಬ್ಯಾಂಕ್ ಮಾಸಿಕ ಮಹಾಸಭೆ

0

ಪುತ್ತೂರು: ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಮಾಸಿಕ ಸಭೆಯು ಸಂಘದ ಅದ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್‌ರವರ ಅಧ್ಯಕ್ಷತೆಯಲ್ಲಿ ನಡೆಯಿತು. ರಾಜ್ಯ ಸರಕಾರವು ರೈತರಿಗೆ ಜಾರಿಗೆ ತಂದಿರುವ ಯಶಸ್ವಿನಿ ಆರೋಗ್ಯ ರಕ್ಷಣಾ ಯೋಜನೆಯು ನ.1ರಿಂದ ಜಾರಿಗೆ ಬಂದಿದ್ದು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಭೆಯಲ್ಲಿ ವಿನಂತಿಸಲಾಯಿತು.

ಅಲ್ಲದೆ ಹಲವಾರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಚರ್ಚಿಸಲಾಯಿತು. ಸಂಘದ ಉಪಾಧ್ಯಕ್ಷ ರಾಜಶೇಖರ ಜೈನ್, ನಿರ್ದೇಶಕರಾದ ಸುಭಾಷ್ ನಾಯಕ್, ಜಯಲಕ್ಷ್ಮೀ ಸುರೇಶ್, ಸುಬ್ರಹ್ಮಣ್ಯ ಗೌಡ ಹನಿಯೂರು, ಮೋಹನ್ ಪಕ್ಕಳ ಕುಂಡಾಪು, ಅಶ್ರಫ್ ಕಲ್ಲೇಗ, ಸುಂದರ ಪೂಜಾರಿ ಬಡಾವು, ದೇವಾನಂದ ಕೆ., ಶ್ರೀನಿವಾಸ ಕೆ., ರಾಜು ಉಪಸ್ಥಿತರಿದ್ದರು. ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಸ್ವಾಗತಿಸಿ ಮುಖ್ಯ ವ್ಯವಸ್ಥಾಪಕಿ ರಾಧಾ ಬಿ. ರೈ ವಂದಿಸಿದರು.

LEAVE A REPLY

Please enter your comment!
Please enter your name here