ಈಶ್ವರಮಂಗಲ ಬೆಳ್ಳಿಚಡವು ಅಯ್ಯಪ್ಪ ಸ್ವಾಮಿ, ಶಾರದಾಂಭ ಭಜನಾ ಮಂದಿರ, ನಾಗನ ಪ್ರತಿಷ್ಠಾ ಮಹೋತ್ಸವ-ಆಮಂತ್ರಣ ಪತ್ರಿಕೆ ಬಿಡುಗಡೆ

0

ಪುತ್ತೂರು: ಈಶ್ವರಮಂಗಲ ಬೆಳ್ಳಿಚಡವು ಶ್ರೀ ಅಯ್ಯಪ್ಪ ಸ್ವಾಮಿ ಹಾಗೂ ಶಾರದಾಂಭ ಭಜನಾ ಮಂದಿರ ಮತ್ತು ನಾಗ ಪ್ರತಿಷ್ಠಾ ಮಹೋತ್ಸವವು ದ.7 ಮತ್ತು 8 ರಂದು ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆಯು ನ.1 ರಂದು ಭಜನಾ ಮಂದಿರದ ಆವರಣದೊಳಗೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವ ಅಧ್ಯಕ್ಷ ಡಾ.ಶ್ರೀಕುಮಾರ್ ಕತ್ರಿಬೈಲು, ಅಧ್ಯಕ್ಷ ರಾಮ್‌ಪ್ರಸಾದ್ ಮೇನಾಲ, ಪ್ರತಿಷ್ಠಾಪನ ಸಮಿತಿಯ ಅಧ್ಯಕ್ಷ ಅಣ್ಣಯ್ಯ ಗೌಡ ಕನ್ನಟಿಮಾರು, ಕಾರ್ಯಾಧ್ಯಕ್ಷ ಗಣೇಶ್ ಪೊಳಲಿ, ಅಯ್ಯಪ್ಪ ಸೇವಾ ಸಮಿತಿಯ ಗೌರವ ಅಧ್ಯಕ್ಷ ಉದಯ ಕುಮಾರ್ ಪಟ್ಲಡ್ಕ, ಅಧ್ಯಕ್ಷ ಚಂದ್ರಶೇಖರ ಪೆರ್ನಾಜೆ, ಶಿವರಾಮ ಶರ್ಮ ಕತ್ರಿಬೈಲು, ಪ್ರತಿಷ್ಠಾಪನ ಸಮಿತಿಯ ಗೌರವ ಸಲಹೆಗಾರ ಶ್ರೀಕೃಷ್ಣ ಭಟ್ ಮುಂಡ್ಯ, ಮಂದಿರದ ಮಾರ್ಗದರ್ಶಕ ರಾಮ ಗುರುಸ್ವಾಮಿ, ಗುರುಸ್ವಾಮಿ ಸೀತಾರಾಮ ರೈ, ದಾಮೋದರ ಪಾಟಾಳಿ ಮುಕ್ರಂಪಾಡಿ ಹಾಗೂ ಸಮಿತಿಯ ಸದಸ್ಯರುಗಳು, ಭಕ್ತಾಧಿಗಳು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಚಿನ್ಮಯ್ ರೈ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here