ಚಾರ್ವಾಕ ಪ್ರಾ. ಕೃ. ಪತ್ತಿನ ಸಹಕಾರ ಸಂಘಕ್ಕೆ ನಬಾರ್ಡ್ ಎ. ಜಿ.ಎಂ ಸಂಗೀತಾ ಕರ್ತ ಭೇಟಿ

0

ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾಣಿಯೂರು ಪ್ರಧಾನ ಕಚೇರಿ ಗೆ ನಬಾರ್ಡ್ ಎ.ಜಿ. ಎಂ ಸಂಗೀತಾ ಕರ್ತ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದರು. ಕೇಂದ್ರ ಸರಕಾರ ಬಡ್ಡಿ ರಿಯಾಯಿತಿ ಕ್ಲೈಂ ಬಿಲ್ ಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿ ಕ್ರಮ ಬದ್ದ ದಾಖಲೆ ಇರುವ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸಿ , ನಬಾರ್ಡ್ ಅನುದಾನದಿಂದ ಗೋದಾಮು ನಿರ್ಮಾಣ ಮಾಡಲು ಸಲಹೆ ನೀಡಿದರು.ಈ ಸಂದರ್ಭದಲ್ಲಿ ಎಸ್. ಸಿ.ಡಿ. ಸಿ. ಸಿ ಬ್ಯಾಂಕ್ ನ ಹಿರಿಯ ವಲಯ ಮೇಲ್ವಿಚಾರಕರು ಗಣೇಶ್ ಭಟ್, ವಲಯ ಮೇಲ್ವಿಚಾರಕರಾದ ವಸಂತ ರವರು ಉಪಸ್ಥಿತರಿದ್ದರು.ಸಂಘದ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ ಗೌಡ ಸ್ವಾಗತಿಸಿ ದಾಖಲೆ ಪರಿಶೀಲನೆಗೆ ಸಹಕರಿಸಿದರು.

LEAVE A REPLY

Please enter your comment!
Please enter your name here