ಆರ್ಯಾಪು ಪಂಚಾಯತ್ ಪಿಡಿಒ ವರ್ಗಾವಣೆ ಹಿನ್ನಲೆ – ಇಲ್ಲೇ ಉಳಿಸಿಕೊಳ್ಳುವಂತೆ ಡಾ.ಎಂ‌.ಕೆ ಪ್ರಸಾದ್ ನೇತೃತ್ವದಲ್ಲಿ ಗ್ರಾ.ಪಂ ಸದಸ್ಯರಿಂದ ಶಾಸಕರಿಗೆ ಮನವಿ

0

ಪುತ್ತೂರು: ಬೆಳ್ತಂಗಡಿಗೆ ವರ್ಗಾವಣೆಗೊಂಡ ಆರ್ಯಾಪು ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ನಾಗೇಶ್ ಅವರನ್ನು ಇಲ್ಲೇ ಉಳಿಸಿಕೊಳ್ಳುವಂತೆ ಡಾ.ಎಂ.ಕೆ ಪ್ರಸಾದ್ ಅವರ ನೇತೃತ್ವದಲ್ಲಿ ಶಾಸಕ ಸಂಜೀವ ಮಠಂದೂರುರವರನ್ನು ಭೇಟಿ ಮಾಡಿದ ಪಂಚಾಯತ್ ಸದಸ್ಯರ ನಿಯೋಗ ಒತ್ತಾಯಿಸಿದೆ.


ನ.4 ರಂದು ಮಧ್ಯಾಹ್ನ ತಾಲೂಕು ಪಂಚಾಯತ್ ಕಚೇರಿ ಆವರಣದಲ್ಲಿ ಡಾ.ಎಂ.ಪ್ರಸಾದ್ ಅವರ ನೇತೃತ್ವದ ನಿಯೋಗ ಶಾಸಕರನ್ನು ಭೇಟಿ ಮಾಡಿದ್ದು, ಪಿಡಿಒ ಅವರನ್ನು ಇಲ್ಲಿಯೇ ಉಳಿಸಬೇಕೆಂದು ಗ್ರಾ.ಪಂ ಸದಸ್ಯರ ಆಗ್ರಹವಾಗಿದೆ. ಅವರನ್ನು ಪುನಃ ಇಲ್ಲಿಗೆ ನಿಯೋಜನೆ ಮಾಡಿ, ಇಲ್ಲವಾದರೆ ಗ್ರಾ.ಪಂ ಸದಸ್ಯರು ರಾಜೀನಾಮೆ ನೀಡಲಿದ್ದಾರೆ ಎಂದು ಡಾ.ಎಂ.ಕೆ.ಪ್ರಸಾದ್‌ರವರು ಶಾಸಕರಿಗೆ ಹೇಳಿದರು. ಈ ಕುರಿತು ಶಾಸಕರು ಮತ್ತು ಡಾ.ಎಂ.ಕೆ.ಪ್ರಸಾದ ಅವರ ನಡುವೆ ಸುಧೀರ್ಘ ಮಾತುಕತೆಯೂ ನಡೆದಿದೆ ಎನ್ನಲಾಗಿದೆ. ಗ್ರಾ.ಪಂ ಅಧ್ಯಕ್ಷೆ ಸರಸ್ವತಿ, ಉಪಾಧ್ಯಕ್ಷೆ ಪೂರ್ಣಿಮ, ಸದಸ್ಯರಾದ ವಸಂತ ಶ್ರೀದುರ್ಗಾ, ಪವಿತ್ರ ರೈ ಸಹಿತ ಇತರ ಸದಸ್ಯರು ಉಪಸ್ಥಿತರಿದ್ದರು. ಈ ಬೆಳವಣಿಗೆ ಹಿನ್ನೆಲೆಯಲ್ಲಿ ನ.೫ರಂದು ಶಾಸಕ ಸಂಜೀವ ಮಠಂದೂರುರವರು ಪಕ್ಷದ ಕಾರ್ಯಕರ್ತರೊಂದಿಗೆ ಮತ್ತು ಗ್ರಾ.ಪಂ. ಸದಸ್ಯರೊಂದಿಗೆ ಮಾತುಕತೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here